ಬೆಂಗಳೂರು-ದೆಹಲಿ ವಿಮಾನ ತುರ್ತು ಭೂಸ್ಪರ್ಶ
ನವದೆಹಲಿ, ಜ.6-ಬೆಂಗಳೂರಿನಿಂದ 176 ಮಂದಿಯನ್ನು ಹೊತ್ತೊಯ್ಯುತ್ತಿದ್ದ ಸ್ಪೈಸ್ ಜೆಟ್ ವಿಮಾನ ತಾಂತ್ರಿಕ ದೋಷದಿಂದಾಗಿ ತುರ್ತು ಭೂಸ್ಪರ್ಶ ಮಾಡಿರುವ ಘಟನೆ ಇಂದು ಬೆಳಗ್ಗೆ ಇಲ್ಲಿನ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ಸ್ಪೆ ಸ್ಪೈಸ್ ಜೆಟ್ ಎಸ್ಜಿ-136 ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷಿತವಾಗಿದ್ದಾರೆ ಎಂದು ಏರ್ಲೈನ್ ಸಂಸ್ಥೆ ತಿಳಿಸಿದೆ. ಸ್ಪೈಸ್ ಜೆಟ್ ವಿಮಾನದಲ್ಲಿ ದ್ರವದ ಕೊರತೆಯಿಂದಾಗಿ ಹೈಡ್ರಾಲಿಕ್ ವ್ಯವಸ್ಥೆಯಲ್ಲಿ ವೈಫಲ್ಯ ಕಂಡುಬಂದ ಕಾರಣ ಪೈಲೆಟ್ ಮತ್ತು ಸಿಬ್ಬಂದಿ ಐಜಿಐ ಏರ್ಪೋರ್ಟ್ನಲ್ಲಿ ಬೆಳಗ್ಗೆ 8.45ರಲ್ಲಿ ತುರ್ತು ಪ್ರಕ್ರಿಯೆ ಅನುಸರಿಸಿ ಸುರಕ್ಷಿತ ಭೂಸ್ಪರ್ಶಕ್ಕೆ ನೆರವಾದರು ಎಂದು ಸಂಸ್ಥೆ ಹೇಳಿದೆ.
Eesanje News 24/7 ನ್ಯೂಸ್ ಆ್ಯಪ್ – Click Here to Download
Facebook Comments