ಮಂಗಳೂರು ಜೈಲ್ ಮೇಲೆ ಪೊಲೀಸರ ದಾಳಿ : ಗಾಂಜಾ, ಮೊಬೈಲ್ ವಶ
ಮಂಗಳೂರು,ಸೆ.19-ನಗರದ ಜಿಲ್ಲಾ ಕಾರಾಗೃಹದ ಮೇಲೆ ಬೆಳ್ಳಂಬೆಳಗ್ಗೆ ಪೊಲೀಸರು ದಾಳಿ ನಡೆಸಿ ಮೊಬೈಲ್ ಫೋನ್, ಗಾಂಜಾ ಸೇರಿದಂತೆ ಮತ್ತಿತರ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ. ಭಾಷಾ ಶೆಟ್ಟಿ ಕೊಲೆ ಪ್ರಕರಣ ಸಂಬಂಧ ಆರೋಪಿಗಳ ಮೇಲೆ ಜೈಲಿನಲ್ಲಿದ್ದ ಮತ್ತೊಂದು ತಂಡ ಹಲ್ಲೆ ಮಾಡಿತ್ತು. ಅಲ್ಲದೆ ಜೈಲಿನಲ್ಲಿ ಗುಂಪುಗಳ ನಡುವೆ ಹಲ್ಲೆ, ಹತ್ಯೆ ಯತ್ನ ಸಂಬಂಧ ಗಲಾಟೆಗಳು ನಡೆಯುತ್ತಿತ್ತು. ಈ ಹಿನ್ನೆಲೆಯಲ್ಲಿ ಡಿಸಿಪಿ ಹನುಮಂತರಾಯ ನೇತೃತ್ವದ ತಂಡ ಕಾರಾಗೃಹದ ಮೇಲೆ ದಾಳಿ ನಡೆಸಿದೆ.
Facebook Comments