ನವದೆಹಲಿ,ಫೆ.5- 1993ರ ಮುಂಬೈ ಸರಣಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಹಾಗೂ ಭಾರತದ ಮೋಸ್ಟ್ ವಾಂಟೆಡ್ ಪಾತಕಿ ದಾವೂದ್ ಇಬ್ರಾಹಿಂನ ಬಲಗೈ ಭಂಟ ಅಬುಬಕರ್ನನ್ನು ದುಬೈನಲ್ಲಿ ಬಂಧಿಸಲಾಗಿದೆ. ಸರಿಸುಮಾರು 29 ವರ್ಷಗಳಿಂದ ತಲೆಮರೆಸಿಕೊಂಡಿದ್ದ ದಾವೂಡ್ ಇಬ್ರಾಹಿಂನ ಆಪ್ತ ಅಬುಬಕರ್ ಕೂಡ ಭಾರತದ ಮೋಸ್ಟ್ ವಾಂಟೆಡ್ ಪಾತಕಿ.
ಇದೀಗ ದುಬೈನಲ್ಲಿ ಬಂತನಾಗಿರುವ ಈತನನ್ನು ಭಾರತಕ್ಕೆ ಕರೆತರಲು ರಾಜತಾಂತ್ರಿಕ ಪ್ರಕ್ರಿಯೆಗಳು ಆರಂಭವಾಗಿವೆ. 1993ರ ಮುಂಬೈ ಸರಣಿ ಬಾಂಬ್ ಸ್ಪೋಟದಲ್ಲಿ ಈತನು ಕೂಡ ಪ್ರಮುಖ ಆರೋಪಿಯಾಗಿದ್ದ. ದುಬೈ ಮತ್ತು ಪಾಕಿಸ್ತಾನದಲ್ಲಿ ನೆಲೆಯೂರಿದ್ದ ಅಬುಬಕರ್ ವಿರುದ್ಧ ಭಾರತ ಸರ್ಕಾರ ಈತನ ವಿರುದ್ಧ 1997ರಲ್ಲಿ ರೆಡ್ ಕಾರ್ನರ್ ನೋಟಿಸ್ ಜಾರಿ ಮಾಡಿತ್ತು.
ಅಬುಬಕರ್ ಅಬ್ದುಲ್ ಗಫಲ್ ಶೇಖ್ ಎಂಬುದು ಈತನ ಹೆಸರಾಗಿದ್ದು, ಚಿನ್ನ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳ ಕಳವು ಮಾಡಿಕೊಂಡು ಗಲ್ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡಿದ್ದ. ಭಾರತದ ಕುಖ್ಯಾತ ಪಾತಕಿ ದಾವೂದ್ ಇಬ್ರಾಹಿಂನ ಅತ್ಯಂತ ನಂಬಿಕಸ್ಥ ಭಂಟನಾಗಿದ್ದ ಈತ ಕೆಲವು ಬಾರಿ ಪಾಕಿಸ್ತಾನ ಸೇರಿದಂತೆ ಮತ್ತಿತರ ರಾಷ್ಟ್ರಗಳಲ್ಲಿ ತಲೆಮರೆಸಿಕೊಂಡಿದ್ದ.
ದಾವೂದ್ ಇಬ್ರಾಹಿಂನ ಅತ್ಯಂತ ಆಪ್ತರಾದ ಮೊಹಮ್ಮದ್ ಮತ್ತು ಮುಸ್ತಾಫ ದೋಸ ನಂತರ ಅಬುಬಕರ್ 3ನೇ ಪರಮಾಪ್ತನಾಗಿದ್ದ ಎಂದು ಗೃಹ ಇಲಾಖೆ ಮೂಲಗಳು ತಿಳಿಸಿವೆ. 2019ರಲ್ಲಿ ಈತನನ್ನು ದುಬೈನಲ್ಲಿ ಬಂಸಲಾಗಿತ್ತು. ಆ ವೇಳೆ ಭಾರತ ಸರ್ಕಾರ ಹಸ್ತಾಂತರ ಮಾಡುವಂತೆ ಮನವಿ ಮಾಡಿತ್ತು. ಆದರೆ ಸೂಕ್ತ ದಾಖಲೆಗಳನ್ನು ನೀಡದ ಕಾರಣ ಬಂಧನದಿಂದ ಅಬುಬಕರ್ ಪಾರಾಗಿದ್ದ.
1993 ಮಾರ್ಚ್ 12ರಂದು ಮುಂಬೈನ ಅನೇಕ ಕಡೆ ನಡೆದ ಸರಣಿ ಬಾಂಬ್ ಸ್ಪೋಟದಲ್ಲಿ 257 ಮಂದಿ ಸಾವನ್ನಪ್ಪಿ 1400 ಜನ ಗಾಯಗೊಂಡಿದ್ದರು.ದಾವೂದ್ ಇಬ್ರಾಹಿಂ, ಟೈಗರ್ ಮೆನನ್, ಯಾಕೂಬ್ ಮೆನನ್, ಅಬುಬಕರ್, ಮುಸ್ತಾಫ ಸೇರಿದಂತೆ ಮತ್ತಿತರರು ಸೇರಿಕೊಂಡೇ ಈ ದುಷ್ಕøತ್ಯ ನಡೆಸಿದ್ದು, ತನಿಖೆ ನಂತರ ಸಾಬೀತಾಗಿತ್ತು.
ಇದೇ ಪ್ರಕರಣದಲ್ಲಿ 2013 ಮಾರ್ಚ್ 21ರಂದು ಸುಪ್ರೀಂಕೋರ್ಟ್ ಈ ಪ್ರಕರಣದ ಆರೋಪಿಯಾಗಿದ್ದ ಯಾಕೂಬ್ ಮೆನನ್ಗೆ ನೀಡಲಾಗಿದ್ದ ಮರಣದಂಡನೆ ಶಿಕ್ಷೆಯನ್ನು ಎತ್ತಿ ಹಿಡಿದಿತ್ತು.ಬಾಂಬ್ ಸೋಟಿಸಲು ಹಣಕಾಸಿನ ನೆರವು, ವಾಹನಗಳ ಖರೀದಿ ಮತ್ತು ಬಾಂಬ್ಗಳನ್ನು ಶೇಖರಿಸಿಕೊಂಡಿದ ಆರೋಪಗಳು ಈತನ ಮೇಲಿದ್ದವು.
2015 ಜುಲೈ 30ರಂದು ಮಹಾರಾಷ್ಟ್ರದ ನಾಗಪುರದ ಸೆಂಟ್ರಲ್ ಜೈಲಿನಲ್ಲಿ ಯಾಕೂಬ್ ಮೆನನ್ಗೆ ನೇಣಿಗೇರಿಸಲಾಗಿತ್ತು. ದಾವೂದ್ ಇಬ್ರಾಹಿಂ ಮತ್ತು ಟೈಗರ್ ಮೆನನ್ ಪ್ರಸ್ತುತ ಪಾಕಿಸ್ತಾನದ ಕರಾಚಿಯಲ್ಲಿದ್ದು, ಐಎಸ್ಐ ಭದ್ರತೆಯಲ್ಲಿದ್ದಾನೆ. ಆತನನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ತನ್ನೆಲ್ಲ ಪ್ರಯತ್ನವನ್ನು ಮುಂದುವರೆಸಿದೆ.
