ಇಂದಿನಿಂದ ಜಾರಿಯಾದ ಹೊಸ ಕಾಯ್ದೆಯಡಿ ಬೆಂಗಳೂರಲ್ಲಿ 2 ಪ್ರಕರಣ ದಾಖಲು

ಬೆಂಗಳೂರು,ಜು.1– ದೇಶದಲ್ಲಿ ಇಂದಿನಿಂದ ಹೊಸ ಮೂರು ಅಪರಾಧ ಕಾಯ್ದೆ ಜಾರಿಗೆ ಬಂದಿದ್ದು, ನಗರದಲ್ಲಿ ಎರಡು ಯುಡಿಆರ್‌ ಪ್ರಕರಣಗಳು ದಾಖಲಾಗಿವೆ. ಅಪರಾಧ ಕಾಯ್ದೆ ಜಾರಿಯಾಗು ತ್ತಿದ್ದಂತೆ ಈವರೆಗೆ ಹೊಸ ಕಾಯ್ದೆಯಡಿ ಆಡುಗೋಡಿ ಮತ್ತು ಎಚ್‌ಎಸ್‌‍ಆರ್‌ ಲೇಔಟ್‌ನಲ್ಲಿ ಯುಡಿಆರ್‌ ಪ್ರಕರಣಗಳು ದಾಖಲಾಗಿವೆ. ಎರಡು ಠಾಣೆಗಳಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ (ಬಿಎನ್‌ಎಸ್‌‍ಎಸ್‌‍) 194ನೇ ಕಾಯ್ದೆ ಪ್ರಕಾರ ಪ್ರಕರಣಗಳು ದಾಖಲಾಗಿವೆ. ಹಾಸನ ಗ್ರಾಮಾಂತರ ಪೊಲೀಸ್‌‍ ಠಾಣೆಯಲ್ಲಿ ಸ್ವಯಂ ಅಪಘಾತ ಪ್ರಕರಣ ಸಹ ಹೊಸ ಅಪರಾಧ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.