ಮದುವೆ ಬಸ್ ಉರುಳಿ ಬಿದ್ದು 20 ಮಂದಿ ಗಾಯ

ಕನಕಪುರ, ಅ.20- ಮದುವೆಗೆ ಜನರನ್ನು ಕರೆದುಕೊಂಡು ಹೋಗುತ್ತಿದ್ದ ಖಾಸಗಿ ಬಸ್ ಉರುಳಿಬಿದ್ದು ಸುಮಾರು 20 ಮಂದಿ ಗಾಯಗೊಂಡಿರುವ ಘಟನೆ ಇಂದು ಬೆಳಗ್ಗೆ ಹೆಗನೂರು ಬಳಿಯ ಅರಣ್ಯ ಪ್ರದೇಶದಲ್ಲಿ ಸಂಭವಿಸಿದೆ. ಸಾತನೂರು ಬಳಿಯ ಉಯ್ಯಬ್ಬಳ್ಳಿ ಹೋಬಳಿ ತಗಡೆಗೌಡನ ದೊಡ್ಡಿ ಗ್ರಾಮದ ಸುಮಾರು 60 ಮಂದಿ ಸಂಗಮದ ಬಳಿ ಇರುವ ಶಿವ ಶರಣೇಶ್ವರ ದೇವಾಲಯದಲ್ಲಿ ನಡೆಯುತ್ತಿದ್ದ ಮದುವೆ ಕಾರ್ಯಕ್ರಮಕ್ಕೆ ಖಾಸಗಿ ಬಸ್‌ನಲ್ಲಿ ತೆರಳುತ್ತಿದ್ದರು. ವಧು-ವರ ಮತ್ತು ಕೆಲವರು ಕಾರಿನಲ್ಲಿ ತೆರಳಿದರೆ ಸುಮಾರು 60 ಮಂದಿ ಬಸ್‌ನಲ್ಲಿ ಅಲ್ಲಿಗೆ ಹೋಗುತ್ತಿದ್ದರು. ಬೆಳಗ್ಗೆ … Continue reading ಮದುವೆ ಬಸ್ ಉರುಳಿ ಬಿದ್ದು 20 ಮಂದಿ ಗಾಯ