ಹತ್ರಾಸ್‌‍ ಕಾಲ್ತುಳಿತ ದುರಂತ : ಎಫ್‌ಐಆರ್‌ನಲ್ಲಿ ಕಾಣಿಸಿಕೊಳ್ಳದ ಭೋಲೆ ಬಾಬಾನ ಹೆಸರು

ನವದೆಹಲಿ,ಜು.3- ಉತ್ತರ ಪ್ರದೇಶದ ಹತ್ರಾಸ್‌‍ನಲ್ಲಿ ನಿನ್ನೆ ಸಂಜೆ ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ಕಾಲ್ತುಳಿತ ಸಂಭವಿಸಿ ಕನಿಷ್ಠ 121 ಜನರು ಸಾವನ್ನಪ್ಪಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವಯಂಘೋಷಿತ ದೇವಮಾನವ ಭೋಲೆ ಬಾಬಾ ಎಂದು ಕರೆಸಿಕೊಳ್ಳುವ ಸೂರಜ್‌ ಪಾಲ್‌ಸಿಂಗ್‌ ವಿರುದ್ಧ ಎಫ್‌ಐಆರ್‌ ದಾಖಲಾಗದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ದೇವಮಾನವನ ಆಪ್ತ ಸಹಾಯಕ ಅಥವಾ ಮುಖ್ಯ ಸೇವಾದಾರ ಮತ್ತು ಕಾರ್ಯಕ್ರಮದ ಆಯೋಜಕರ ವಿರುದ್ಧ ಮಾತ್ರ ಪ್ರಕರಣ ದಾಖಲಿಸಲಾಗಿದೆ.ಸ್ಥಳೀಯ ಆಡಳಿತ ಮತ್ತು ಸಂಘಟಕರ ಪಾತ್ರದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ. 80,000 … Continue reading ಹತ್ರಾಸ್‌‍ ಕಾಲ್ತುಳಿತ ದುರಂತ : ಎಫ್‌ಐಆರ್‌ನಲ್ಲಿ ಕಾಣಿಸಿಕೊಳ್ಳದ ಭೋಲೆ ಬಾಬಾನ ಹೆಸರು