ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಪೊಲೀಸರಿಂದ ಗ್ರಿಲ್

ಬೆಂಗಳೂರು,ಆ.29– ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಕ್ಷಿಯಾಗಿ ಪರಿಗಣಿಸಿರುವ ನಟ ಚಿಕ್ಕಣ್ಣ ಅವರು ಇಂದು ತನಿಖಾಧಿಕಾರಿ ಮುಂದೆ 2ನೇ ಬಾರಿ ವಿಚಾರಣೆಗೆ ಹಾಜರಾದರು. ಬಸವೇಶ್ವರನಗರ ಠಾಣೆಯ ಕಟ್ಟಡದಲ್ಲಿರುವ ವಿಜಯನಗರದ ಎಸಿಪಿ ಚಂದನ್ ಅವರ ಕಛೇರಿಯಲ್ಲಿ ಇಂದು ಬೆಳಗ್ಗೆ ನಟ ಚಿಕ್ಕಣ್ಣ ಅವರು ಹಾಜರಾಗಿ ವಿಚಾರಣೆಗೆ ಸಹಕರಿಸಿದ್ದಾರೆ. ರೇಣುಕಾಸ್ವಾಮಿ ಕೊಲೆಗೂ ಮುನ್ನ ಸ್ಟೋನಿಬ್ರೋಕ್ ರೆಸ್ಟೋರೆಂಟ್ನಲ್ಲಿ ಡಿ.ಗ್ಯಾಂಗ್ನೊಂದಿಗೆ ಪಾರ್ಟಿಯಲ್ಲಿ ಚಿಕ್ಕಣ್ಣ ಭಾಗಿಯಾಗಿದ್ದರು. ಹಾಗಾಗಿ ಚಿಕ್ಕಣ್ಣ ಅವರನ್ನು ವಿಚಾರಣೆಗೊಳಪಡಿಸಿ ತನಿಖಾಧಿಕಾರಿ ಮಾಹಿತಿ ಪಡೆದುಕೊಂಡು ಸಾಕ್ಷಿಯಾಗಿ ಪರಿಗಣಿಸಿದ್ದಾರೆ. ಇತ್ತೀಚೆಗೆ ಪರಪ್ಪನ ಅಗ್ರಹಾರ ಕಾರಾಗೃಹಕ್ಕೆ … Continue reading ಹಾಸ್ಯ ನಟ ಚಿಕ್ಕಣ್ಣಗೆ ಮತ್ತೆ ಪೊಲೀಸರಿಂದ ಗ್ರಿಲ್