ಹೋಳಿ ರಂಗಿನಿಂದ ಪಾರಾಗಲು ಮಸೀದಿಗೆ ಹೊದಿಕೆ

Social Share

ಅಲಿಗಢ,ಮಾ.7- ಪ್ರಾರ್ಥನ ಮಂದಿರದ ಮೇಲೆ ಹೋಳಿ ರಂಗು ಎರಚುವುದನ್ನು ತಡೆಗಟ್ಟುವ ಉದ್ದೇಶದಿಂದ ಮಸೀದಿಯೊಂದರನ್ನು ಟಾರ್ಪಾಲಿನ್‍ನಿಂದ ಮುಚ್ಚಿರುವ ಘಟನೆ ಉತ್ತರ ಪ್ರದೇಶದ ಅಲಿಗಢದಲ್ಲಿ ನಡೆದಿದೆ.

ಹೋಳಿ ಹಬ್ಬದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಪೊಲೀಸ್ ಆಡಳಿತದ ಸೂಚನೆಯ ಮೇರೆಗೆ, ಅಲಿಘರ್‍ನ ಅತ್ಯಂತ ಸೂಕ್ಷ್ಮ ಪ್ರದೇಶವಾದ ಕ್ರಾಸ್‍ರೋಡ್‍ನಲ್ಲಿರುವ ಅಬ್ದುಲ್ ಕರೀಂ ಮಸೀದಿ ಹಲ್ವಾಯಿಯನ್ ಅನ್ನು ಟಾರ್ಪಾಲಿನ್‍ನಿಂದ ಮುಚ್ಚಲಾಗಿದೆ.

ವಿಶೇಷವೆಂದರೆ, ಕಳೆದ ಕೆಲವು ವರ್ಷಗಳ ಹೋಳಿಯಂತೆ, ಸೂಕ್ಷ್ಮ ಪ್ರದೇಶದ ಮಸೀದಿಯನ್ನು ರಾತ್ರಿಯಿಡೀ ಟಾರ್ಪಾಲಿನ್‍ನಿಂದ ಮುಚ್ಚಲಾಯಿತು, ಆದ್ದರಿಂದ ಹೋಳಿ ನಿಮಿತ್ತ ಯಾರೂ ಮಸೀದಿಯ ಮೇಲೆ ಬಣ್ಣ ಎರಚಲು ಸಾಧ್ಯವಾಗುವುದಿಲ್ಲ.

ತಲೆಮರೆಸಿಕೊಂಡ ಶಾಸಕ ಮಾಡಾಳ್ ಬಂಧನಕ್ಕೆ ಲೋಕಾಯುಕ್ತ ವ್ಯಾಪಕ ಶೋಧ

ಮಸೀದಿಯ ಆಡಳಿತ ಮಂಡಳಿಯ ಹಾಜಿ ಮೊಹಮ್ಮದ್ ಇಕ್ಬಾಲ ಅವರು ಜಿಲ್ಲಾಡಳಿತದ ಸೂಚನೆಯ ಮೇರೆಗೆ ನಾವು ಮಸೀದಿಗೆ ಟಾರ್ಪಾಲಿನ್‍ನಿಂದ ಮುಚ್ಚಿದ್ದೇವೆ, ಆದ್ದರಿಂದ ಯಾರೂ ಮಸೀದಿಗೆ ಬಣ್ಣ ಅಥವಾ ಕೊಳಕು ಎಸೆಯಬಾರದು ಎಂದು ಮನವಿ ಮಾಡಿಕೊಂಡಿದ್ದಾರೆ.

ತೆರಿಗೆ, ಬೆಲೆ ಏರಿಕೆ ಹೆಸರಲ್ಲಿ ಹಣ ಲೂಟಿ : ಸಿದ್ದರಾಮಯ್ಯ

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಸರ್ಕಾರ ಬಂದಾಗಿನಿಂದ ಸುಮಾರು 6 ರಿಂದ 7 ವರ್ಷಗಳಿಂದ ಮಸೀದಿಯನ್ನು ಮುಚ್ಚಲಾಗುತ್ತಿದೆ, ಆಡಳಿತದ ಸಹಾಯದಿಂದ ಯಾರೂ ಬಣ್ಣ ಎರಚದಂತೆ ನಾವು ಮಸೀದಿಯನ್ನು ಮುಚ್ಚುತ್ತೇವೆ ಎಂದು ನಿವಾಸಿ ಅಖೀಲ್ ಪಹಲ್ವಾನ್ ಹೇಳಿದ್ದಾರೆ.

Aligarh, Mosque, Covered, Ahead, Holi, Ensure, Colour,

Articles You Might Like

Share This Article