Thursday, March 28, 2024
Homeರಾಷ್ಟ್ರೀಯಬಿಜೆಪಿಯಿಂದ ಎಎಪಿ ಶಾಸಕರಿಗೆ 25 ಕೋಟಿ ಆಫರ್ ; ಕೇಜ್ರಿವಾಲ್

ಬಿಜೆಪಿಯಿಂದ ಎಎಪಿ ಶಾಸಕರಿಗೆ 25 ಕೋಟಿ ಆಫರ್ ; ಕೇಜ್ರಿವಾಲ್

ನವದೆಹಲಿ,ಜ.27- ರಾಷ್ಟ್ರ ರಾಜಧಾನಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಏಳು ಆಮ್ ಆದ್ಮಿ ಪಕ್ಷದ (ಎಎಪಿ) ಶಾಸಕರನ್ನು ತಲಾ 25 ಕೋಟಿ ನೀಡಿ ಖರೀದಿಸಲು ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.

ಎಎಪಿ ಶಾಸಕರೊಂದಿಗೆ ಬಿಜೆಪಿ ಮಾತುಕತೆಯಲ್ಲಿ ತೊಡಗಿದೆ ಮತ್ತು ದೆಹಲಿ ಮದ್ಯ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿಯನ್ನು ಸನ್ನಿಹಿತವಾಗಿ ಬಂಧಿಸುವುದಾಗಿ ಬೆದರಿಕೆ ಹಾಕಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ. ಆಪಾದಿತ ಸಂಭಾಷಣೆಯು ದೆಹಲಿಯಲ್ಲಿ ಎಎಪಿ ಸರ್ಕಾರವನ್ನು ಉರುಳಿಸುವ ಕೆಟ್ಟ ಯೋಜನೆಯನ್ನು ಒಳಗೊಂಡಿದೆ ಎಂದು ಅವರು ದೂರಿದ್ದಾರೆ.

ಜನರ ಗಮನ ಬೇರೆಡೆ ತಿರುಗಿಸುತ್ತದೆ ಕೇಂದ್ರ ಸರ್ಕಾರ : ಜೈರಾಮ್

ಸುದೀರ್ಘ ಸಾಮಾಜಿಕ ಮಾಧ್ಯಮ ಪೋಸ್ಟ್‍ನಲ್ಲಿ, ದೆಹಲಿ ಮುಖ್ಯಮಂತ್ರಿ ಈ ಆರೋಪ ಮಾಡಿದ್ದಾರೆ. ಇತ್ತೀಚೆಗೆ, ಅವರು ಬಿಜೆಪಿ ದೆಹಲಿ ಮುಖಂಡರು ನಮ್ಮ 7 ಶಾಸಕರನ್ನು ಸಂಪರ್ಕಿಸಿ – ಕೆಲವು ದಿನಗಳ ನಂತರ ನಾವು ಕೇಜ್ರಿವಾಲ್ ಅವರನ್ನು ಬಂಧಿಸುತ್ತೇವೆ. ನಂತರ ನಾವು ಶಾಸಕರನ್ನು ಒಡೆಯುತ್ತೇವೆ. 21 ಶಾಸಕರ ಜೊತೆ ಮಾತುಕತೆ ನಡೆಸಲಾಗಿದೆ. ಇತರರೊಂದಿಗೂ ಮಾತುಕತೆ.ಆ ನಂತರ ದೆಹಲಿಯ ಆಮ್ ಆದ್ಮಿ ಸರ್ಕಾರವನ್ನು ಉರುಳಿಸುತ್ತೇವೆ.ನೀವೂ ಬನ್ನಿ 25 ಕೋಟಿ ನೀಡಿ ಬಿಜೆಪಿ ಟಿಕೆಟ್ ಮೇಲೆ ಚುನಾವಣೆಗೆ ಸ್ರ್ಪಧಿಸಲು ಆಫರ್ ನೀಡಿದ್ದಾರಂತೆ.

21 ಶಾಸಕರನ್ನು ಸಂಪರ್ಕಿಸುವ ಹೇಳಿಕೆಯ ಹೊರತಾಗಿಯೂ, ಕೇವಲ ಏಳು ಶಾಸಕರನ್ನು ಸಂಪರ್ಕಿಸಲಾಗಿದೆ ಎಂದು ಆಪ್‍ಗೆ ಲಭ್ಯವಿರುವ ಮಾಹಿತಿಯು ಸೂಚಿಸುತ್ತದೆ ಮತ್ತು ಅವರೆಲ್ಲರೂ ಪ್ರಲೋಭನಗೊಳಿಸುವ ಪ್ರಸ್ತಾಪವನ್ನು ದೃಢವಾಗಿ ನಿರಾಕರಿಸಿದ್ದಾರೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.

ಇದರರ್ಥ ಯಾವುದೇ ಮದ್ಯದ ಹಗರಣದ ತನಿಖೆಗಾಗಿ ನನ್ನನ್ನು ಬಂಸಲಾಗುತ್ತಿಲ್ಲ ಆದರೆ ಅವರು ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರವನ್ನು ಉರುಳಿಸಲು ಪಿತೂರಿ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು. ಕಳೆದ ಒಂಬತ್ತು ವರ್ಷಗಳಲ್ಲಿ ಅವರು ನಮ್ಮ ಸರ್ಕಾರವನ್ನು ಬೀಳಿಸಲು ಅನೇಕ ಷಡ್ಯಂತ್ರಗಳನ್ನು ಮಾಡಿದರು.

ಆದರೆ ಅವರು ಯಾವುದೇ ಯಶಸ್ಸನ್ನು ಪಡೆಯಲಿಲ್ಲ, ದೇವರು ಮತ್ತು ಜನರು ಯಾವಾಗಲೂ ನಮ್ಮನ್ನು ಬೆಂಬಲಿಸುತ್ತಾರೆ, ನಮ್ಮ ಎಲ್ಲಾ ಶಾಸಕರು ಸಹ ಬಲವಾಗಿ ಜೊತೆಯಾಗಿದ್ದಾರೆ. ಈ ಬಾರಿಯೂ ಈ ಜನರು ತಮ್ಮ ನೀಚತನದಲ್ಲಿ ವಿಫಲರಾಗುತ್ತಾರೆ ಎಂದಿದ್ದಾರೆ.

RELATED ARTICLES

Latest News