ಬೆಂಗಳೂರು,ಸೆ.16- ನಗರದಲ್ಲಿದ್ದ ಕೆರೆಗಳನ್ನು ನುಂಗಿ ನೀರು ಕುಡಿದಿರುವುದು ಕೇವಲ ಭೂಗಳ್ಳರು ಹಾಗೂ ಬಿಬಿಎಂಪಿಯವರಲ್ಲ ಇವರ ಜೊತೆಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಪಾತ್ರವೂ ಇದೆ. ಬೆಂಗಳೂರು ಅಭಿವೃದ್ಧಿಯ ಹೊಣೆ ಹೊತ್ತಿರುವ ಬಿಡಿಎ ಅಧಿಕಾರಿಗಳೇ ನಗರದ ಹಲವಾರು ಕೆರೆಗಳನ್ನು ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದಾರೆ.
ಕಳೆದ 2013-14ನೇ ಸಾಲಿನಲ್ಲಿ 23 ಕೆರೆಗಳನ್ನು ಸಂಪೂರ್ಣವಾಗಿ ಒತ್ತುವರಿ ಮಾಡಿರುವ ಬಿಡಿಎ ಕೆರೆ ಅಂಗಳದಲ್ಲಿ ಲೇಔಟ್ ನಿರ್ಮಾಣ ಮಾಡಿ, ಕೋಟಿ ಕೋಟಿ ರೂ.ಗಳಿಗೆ ಮಾರಾಟ ಮಾಡಿದೆ. 2014ರಲ್ಲಿ ಕೆರೆ ಒತ್ತುವರಿ ಮಾಡಿ ಲೇಔಟ್ ನಿರ್ಮಾಣ ಮಾಡಿದ್ದ ಬಿಡಿಎ ಅಧಿಕಾರಿಗಳು 2015ರಲ್ಲಿ ಒತ್ತುವರಿ ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಪತ್ರ ಬರೆದಿರುವುದು ಇದೀಗ ಬಹಿರಂಗಗೊಂಡಿದೆ.
ಇದನ್ನೂ ಓದಿ : ಅಪ್ಪು ಜನ್ಮದಿನವನ್ನು ‘ಸ್ಪೂರ್ತಿ ದಿನ’ವಾಗಿ ಆಚರಿಸಲು ಸರ್ಕಾರ ಘೋಷಣೆ
ಅದರಲ್ಲೂ ನಗರದಲ್ಲಿ ಜೀವಂತವಾಗಿದ್ದ 23 ಕೆರೆಗಳಿಗೆ ಮಣ್ಣು ತುಂಬಿ ಬಡಾವಣೆ ನಿರ್ಮಾಣ ಮಾಡಿದ್ದ ಬಿಡಿಎಯವರು 23 ಕೆರೆ ನುಂಗಿ ನಿರ್ಮಿಸಿದ್ದು ಬರೊಬ್ಬರಿ 3530 ನಿವೇಶನಗಳು. ಜೀವಂತ ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಿದ್ದ ಬಿಡಿಎ ಅದಿಕಾರಿಗಳು 2015ರಲ್ಲಿ ಬಡಾವಣೆಗಳನ್ನು ಕಾನೂನು ಬದ್ದಗೊಳಿಸುವಂತೆ ಸರ್ಕಾರಕ್ಕೆ ಬರೆದಿದ್ದ ಪತ್ರ ಈ ಸಂಜೆಗೆ ಲಭ್ಯವಾಗಿದೆ.
ನಗರದ ಹಲವಾರು ಪ್ರದೇಶಗಳಲ್ಲಿದ್ದ ಕೆರೆಗಳು ಮೂಲ ಸ್ವರೂಪ ಕಳೆದುಕೊಂಡಿವೆ ಎಂಬ ಏಕೈಕ ಕಾರಣಕ್ಕೆ 23 ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಿಸಿರುವುದು ಇದೀಗ ಜಗಜ್ಜಾಹೀರಾಗಿದೆ. 1985ರಲ್ಲಿ ಲಕ್ಷ್ಮಣ ರಾವ್ ಸಮಿತಿ ನಡೆಸಿದ ಕೆರೆಗಳ ಸರ್ವೇಗಳ ವರದಿಯ ಆಧಾರದ ಮೇರೆಗೆ 23 ಕೆರೆಗಳನ್ನು ಮುಚ್ಚಿ ಬಡಾವಣೆ ನಿರ್ಮಾಣ ಮಾಡಲಾಗಿತ್ತು. ಅಂದು ಕೆರೆಯಾಗಿದ್ದ ಪ್ರದೇಶ ಇದೀಗ ಬಡಾವಣೆಗಳಾಗಿದ್ದು, ಅಂತಹ ಪ್ರದೇಶಗಳಲ್ಲಿ ಸಾಧಾರಣ ಮಳೆಯಾದರೂ ಅಲ್ಲಿನ ನಿವಾಸಿಗಳು ಪ್ರವಾಹದ ಭೀತಿ ಎದುರಿಸುವಂತಾಗಿದೆ.
ಮಾಡಬಾರದ ಎಡವಟ್ಟು ಮಾಡಿ ನಂತರ ಕೆರೆ ಮುಚ್ಚಿ ನಿರ್ಮಿಸಿದ್ದ ಬಡಾವಣೆಗಳನ್ನು ಕಾನೂನು ಬದ್ಧಗೊಳಿಸುವಂತೆ ಸರ್ಕಾರಕ್ಕೆ ಬಿಡಿಎ ಮಾಡಿಕೊಂಡಿದ್ದ ಮನವಿಗೆ ಇದುವರೆಗೂ ಯಾವುದೆ ಮನ್ನಣೆ ದೊರೆತಿಲ್ಲ. ಹಾಗಾದರೆ ಬಿಡಿಎಯಿಂದ ಒತ್ತುವರಿಯಾಗಿ ಬಡಾವಣೆಗಳಾಗಿ ಪರಿವರ್ತನೆಗೊಂಡಿರುವ ಕೆರೆಗಳು ಯಾವ್ಯಾವು ಅಂತೀರಾ.!
ಇಲ್ಲಿದೆ ನೋಡಿ ಲಿಸ್ಟ್ :
ಗೆದ್ದಲಹಳ್ಳಿ ಕೆರೆ 126 ನಿವೇಶನ ನಿರ್ಮಾಣ
ಚಿಕ್ಕಮಾರನಹಳ್ಳಿ ಕೆರೆ 115 ನಿವೇಶನ ನಿರ್ಮಾಣ
ಬಾಣಸವಾಡಿ ಕೆರೆ 67 ನಿವೇಶನ ನಿರ್ಮಾಣ
ಚನ್ನಸಂದ್ರ ಕೆರೆ 222 ನಿವೇಶನ ನಿರ್ಮಾಣ
ಶಿನಿವಾಗಿಲು ಅಮಾನಿಕೆರೆ 486 ನಿವೇಶನ ನಿರ್ಮಾಣ
ಬಿಳೇಕಹಳ್ಳಿ ಕೆರೆ 312 ನಿವೇಶನ ನಿರ್ಮಾಣ
ನಾಗಸಂದ್ರ ಚೆನ್ನಮ್ಮಕೆÀರೆ 328 ನಿವೇಶನ ನಿರ್ಮಾಣ
ತಿಪ್ಪಸಂದ್ರ ಕೆರೆ (3ನೇ ಹಂತ) 234 ನಿವೇಶನ ನಿರ್ಮಾಣ
ತಿಪ್ಪಸಂದ್ರ ಕೆರೆ (2ನೇ ಹಂತ) 13 ನಿವೇಶನ ನಿರ್ಮಾಣ
ಅಗರ ಕೆರೆ 113 ನಿವೇಶನ ನಿರ್ಮಾಣ
ಎಳ್ಳುಕುಂಟೆ ಕೆರೆ 161 ನಿವೇಶನ ನಿರ್ಮಾಣ
ಕಾಚರಕನಹಳ್ಳಿ ಕೆರೆ 126 ನಿವೇಶನ ನಿರ್ಮಾಣ
ಹುಳಿಮಾವು ಕೆರೆ 153 ನಿವೇಶನ ನಿರ್ಮಾಣ
ವೆಂಕಟರಾಯನ ಕೆರೆ 130 ನಿವೇಶನ ನಿರ್ಮಾಣ
ನಾಗರಬಾವಿ ಕೆರೆ 37 ನಿವೇಶನ ನಿರ್ಮಾಣ
ಚಳ್ಳಕೆರೆ 71 ನಿವೇಶನ ನಿರ್ಮಾಣ
ದೊಮ್ಮಲೂರು ಕೆರೆ 10 ನಿವೇಶನ ನಿರ್ಮಾಣ
ಮೇಸ್ತ್ರಿ ಪಾಳ್ಯ ಕೆರೆ 23 ನಿವೇಶನ ನಿರ್ಮಾಣ
ಬೆನ್ನಿಗಾನಹಳ್ಳಿ ಕೆರೆ 18 ನಿವೇಶನ ನಿರ್ಮಾಣ
ಹೆಣ್ಣೂರು ಕೆರೆ 434 ನಿವೇಶನ ನಿರ್ಮಾಣ
ತಲಘಟ್ಟಪುರ ಕೆರೆ 94 ನಿವೇಶನ ನಿರ್ಮಾಣ
ಕೇತಮಾರನಹಳ್ಳಿ ಕೆರೆ 230 ನಿವೇಶನ ನಿರ್ಮಾಣ
ಮಂಗನಹಳ್ಳಿ ಕೆರೆ 27 ನಿವೇಶನ ನಿರ್ಮಾಣ
ಎಂಟು ವಲಯಗಳಲ್ಲಿ ಸರ್ಕಾರಿ ಸಂಸ್ಥೆಗಳು ನಡೆಸಿರುವ ಒಟ್ಟು ಒತ್ತುವರಿ ಅಂಕಿ ಅಂಶ ಇಲ್ಲಿದೆ ನೋಡಿ:
ಬೊಮ್ಮನಹಳ್ಳಿ ವಲಯ
ಒಟ್ಟು ಕೆರೆಗಳ ಸಂಖ್ಯೆ – 47
ಒಟ್ಟು ಜಾಗ – 1,167 ಎಕರೆ
ಒತ್ತುವರಿ – 196.33 ಎಕರೆ
ಒತ್ತುವರಿ ತೆರವು ಬಾಕಿ – 196 ಎಕರೆ
ಒತ್ತುವರಿದಾರರು :
ಬಿಡಿಎ – 59ಎಕರೆ
ಸ್ಲಂ ಬೋರ್ಡ್ – 25.76 ಎಕರೆ
ಬಿಬಿಎಂಪಿ – 2.43 ಎಕರೆ
ಬೆಂಗಳೂರು ದಕ್ಷಿಣ ವಲಯ
ಒಟ್ಟು ಕೆರೆಗಳ ಸಂಖ್ಯೆ -12
ಒಟ್ಟು ಜಾಗ -162.7 ಎಕರೆ
ಒತ್ತುವರಿ – 77.19 ಎಕರೆ
ಒತ್ತುವರಿ ತೆರವು ಬಾಕಿ – 77.19 ಎಕರೆ
ಒತ್ತುವರಿದಾರರು:
ಬಿಬಿಎಂಪಿ – 2.45ಎಕರೆ
ಬಿಡಿಎ – 1 ಎಕರೆ
ಸ್ಲಂ ಬೋರ್ಡ್ – 0.22 ಗುಂಟೆ
ಕೆಎಚ್ಬಿ – 0.8 ಗುಂಟೆ
ಮಹದೇವ ಪುರ ವಲಯ
ಕೆರೆಗಳ ಸಂಖ್ಯೆ – 52
ಒಟ್ಟು ಜಾಗ -1845.6 ಎಕರೆ
ಒತ್ತುವರಿ – 225.15ಎಕರೆ
ಒತ್ತುವರಿ ತೆರವು ಬಾಕಿ – 2142 ಎಕರೆ
ಒತ್ತುವರಿದಾರರು
ಮಿಲಿಟರಿ – 131 ಎಕ್ಕರೆ
ಕೆಐಎಡಿ ಬಿ – 0.6ಗುಂಟೆ
ಜಲಮಂಡಳಿ – 0.13ಗುಂಟೆ
ಯಲಹಂಕ ವಲಯ
ಕೆರೆಗಳ ಸಂಖ್ಯೆ – 28
ಒಟ್ಟು ಜಾಗ -1371.20ಎಕರೆ
ಒತ್ತುವರಿ – 133.5ಎಕರೆ
ಒತ್ತುವರಿ ತೆರವು ಬಾಕಿ – 50.21 ಎಕರೆ
ಒತ್ತುವರಿದಾರರು:
ರೈಲ್ವೆ ಇಲಾಖೆ – 5.19ಎಕರೆ
ರಾಷ್ಟ್ರೀಯ ಹೆದ್ದಾರಿ ಪ್ರಾಕಾರ – 4.5 ಎಕರೆ
ಬಿಬಿಎಂಪಿ – 3.2 ಎಕರೆ
BWSSB – 0.44 ಎಕರೆ
ಕೆಹೆಚ್ ಬಿ – 0.33 ಎಕರೆ
ಪೂರ್ವ ವಲಯ
ಕೆರೆಗಳ ಸಂಖ್ಯೆ – 10
ಒಟ್ಟು ಜಾಗ – 303.24 ಎಕರೆ
ಒತ್ತುವರಿ – 116.35 ಎಕರೆ
ಒತ್ತುವರಿ ತೆರವು ಬಾಕಿ – 113.32 ಎಕರೆ
ಒತ್ತುವರಿದಾರರು
ಬಿಡಿಎ – 47.7 ಎಕರೆ
ಅರಣ್ಯ ಇಲಾಖೆ – 13.23
ರೈಲ್ವೆ ಇಲಾಖೆ – 1.19 ಎಕರೆ
ಅಗ್ನಿಶಾಮಕ ಇಲಾಖೆ – . 30 ಎಕರೆ
ಆರ್ ಆರ್ ನಗರ ವಲಯ
ಕೆರೆಗಳ ಸಂಖ್ಯೆ – 37
ಒಟ್ಟು ಜಾಗ – 852 ಎಕರೆ
ಒತ್ತುವರಿ – 160.6 ಎಕರೆ
ಒತ್ತುವರಿ ತೆರವು ಬಾಕಿ – 160.6 ಎಕರೆ
ಒತ್ತುವರಿದಾರರು
ಬಿಬಿಎಂಪಿ – 71.84 ಎಕರೆ
ಬಿಡಿಎ – 2.24 ಎಕರೆ
ಪಶ್ಚಿಮ ವಲಯ
ಕೆರೆಗಳ ಸಂಖ್ಯೆ – 6
ಒಟ್ಟು ಜಾಗ – 86 ಎಕರೆ
ಒತ್ತುವರಿ – 30 ಎಕರೆ
ಒತ್ತುವರಿ ತೆರವು ಬಾಕಿ – 29.34 ಎಕರೆ
ಒತ್ತುವರಿದಾರರು
ಕರ್ನಾಟಕ ಮಾಲಿನ್ಯ ಮಂಡಳಿ – 15.24 ಎಕರೆ
ಬಿಬಿಎಂಪಿ – 8.35 ಎಕರೆ
ಸ್ಲಂ ಬೋರ್ಡ್ – 2.02ಎಕರೆ
#ರಮೇಶ್ ಪಾಳ್ಯ