ಮಗು ಮಲಗಿದ್ದಾಗಲೇ ಪತ್ನಿ ಕೊಂದು ಪರಾರಿಯಾದ ಪಾಪಿ ಪತಿ

ಬೆಂಗಳೂರು,ಏ.7- ಮಗು ಮಲಗಿರುವಾಗಲೇ ಪಾಪಿ ಪತಿರಾಯನೊಬ್ಬ ಸೀರೆಯಿಂದ ತನ್ನ ಪತ್ನಿಯ ಕತ್ತು ಬಿಗಿದು ಕೊಲೆ ಮಾಡಿ ಪರಾರಿಯಾಗಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಪತಿ ವೆಂಕಟೇಶನಿಂದ ಪ್ರಾಣ ಕಳೆದುಕೊಂಡ ದುರ್ದೈವಿ ಪತ್ನಿಯನ್ನು ನೇತ್ರಾವತಿ(32) ಎಂದು ಗುರುತಿಸಲಾಗಿದೆ. ಮೂಲತಃ ಮಾಗಡಿ ತಾಲೂಕಿನವರಾದ ವೆಂಕಟೇಶ್ ಮತ್ತು ನೇತ್ರಾವತಿ ದಂಪತಿ ತಮ್ಮ 9 ವರ್ಷದ ಮಗನೊಂದಿಗೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆ ವ್ಯಾಪ್ತಿಯ ರಂಗನಾಥಪುರದಲ್ಲಿ ವಾಸಿಸುತ್ತಿದ್ದರು.ವೆಂಕಟೇಶ್ ಗಾರ್ಮೆಂಟ್ಸ್‍ನಲ್ಲಿ ಕೆಲಸ ಮಾಡುತ್ತಿದ್ದು ನಿತ್ಯ ಕುಡಿದು ಬಂದು ಪತ್ನಿ ನೇತ್ರಾವತಿ ಅವರೊಂದಿಗೆ ಜಗಳ … Continue reading ಮಗು ಮಲಗಿದ್ದಾಗಲೇ ಪತ್ನಿ ಕೊಂದು ಪರಾರಿಯಾದ ಪಾಪಿ ಪತಿ