ಒಂದೇ ಮಳೆಗೆ ಮುಳುಗಿದ ದಶಪಥ ಹೆದ್ದಾರಿ, ಸರಣಿ ಅಪಘಾತ, ರೊಚ್ಚಿಗೆದ್ದ ಜನ

Social Share

ಬೆಂಗಳೂರು,ಮಾ.18- ಕೇವಲ ಆರು ದಿನಗಳ ಹಿಂದಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾದ ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ನಿನ್ನೆ ರಾತ್ರಿ ಸುರಿದ ವರ್ಷದ ಮೊದಲ ಸಣ್ಣ ಮಳೆಗೆ ಮತ್ತೆ ಜಲಾವೃತಗೊಂಡಿದೆ.

8,480 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಈ ಹೆದ್ದಾರಿ ರಾಜಧಾನಿಗೆ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆಯ ಸಂಗನಬಸವನದೊಡ್ಡಿ ಬಳಿ ಜಲಾವೃತವಾಗಿದೆ. ಹೆದ್ದಾರಿಯಲ್ಲಿನ ಕೆಳಸೇತುವೆಯಲ್ಲಿ ನೀರು ನಿಂತಿರುವ ಪರಿಣಾಮ ಸರಣಿ ಅಪಘಾತಗಳಾಗಿದ್ದು, ವಾಹನಗಳು ನಿಧಾನಗತಿಯಲ್ಲಿ ಸಾಗುತ್ತಿರುವುದರಿಂದ ಹೆದ್ದಾರಿಯಲ್ಲಿ ಕೆಲ ಕಾಲ ಕಿ.ಮೀ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಇಂದು ಬೆಳಗಿನ ಜಾವ 4.30 ಗಂಟೆಯಲ್ಲಿ ಒಂದು ಲಾರಿ, ಕೋಳಿ ತುಂಬಿದ್ದ ಟೆಂಪೂ, ಕ್ಯಾಂಟರ್ ಹಾಗೂ ಕಾರು ನಡುವೆ ಸರಣಿ ಅಪಘಾತವಾಗಿದೆ. ಇದರಿಂದ ವಾಹನಗಳಿಗೆ ಹಾನಿಯಾಗಿದೆ. ಆದರೆ, ಯಾವುದೇ ಪ್ರಾಣಾಪಾಯವಾಗಿಲ್ಲ.

ಸಿಬಿಐ, ಇಡಿ ನಿಷ್ಪಕ್ಷಪಾತವಾಗಿ ಕಾರ್ಯ ನಿರ್ವಹಿಸುತ್ತಿವೆ : ಶಾ

ಈ ಸುದ್ದಿ ತಿಳಿದ ಕೂಡಲೇ ಸಂಚಾರಿ ಪೊಲೀಸರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿದ್ದು, ಮಳೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಇಲ್ಲದಿರುವುದರಿಂದ ನೀರು ತುಂಬಿಕೊಂಡು ಸಂಚಾರಕ್ಕೆ ಅಡ್ಡಿಯಾಗಿದೆ.

ಕಳೆದ ವರ್ಷದ ಮಳೆಗಾಲದಲ್ಲಿ ಭಾರೀ ಮಳೆಗೆ ಇದೇ ಸ್ಥಳದಲ್ಲಿ ಹೆದ್ದಾರಿ ಜಲಾವೃತಗೊಂಡು ವಾಹನಗಳು ತೇಲುವಂತಾಗಿದ್ದವು. ಆದರೂ ರಸ್ತೆಯನ್ನು ವೈಜ್ಞಾನಿಕವಾಗಿ ನಿರ್ಮಿಸಿಲ್ಲ ಎಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಾಮಗಾರಿ ಪೂರ್ಣಗೊಳ್ಳುವ ಮುನ್ನವೆ ಹೆದ್ದಾರಿ ಉದ್ಘಾಟನೆ ಮಾಡಿರುವುದು ವಾಹನ ಸವಾರರನ್ನು ಕೆರಳಿಸಿದೆ. ನಮ್ಮ ವಾಹನಗಳಿಗೆ ಆಗುವ ನಷ್ಟವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರಿಸಿಕೊಡುತ್ತಾರಾ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ನನ್ನ ಮಾರುತಿ ಸ್ವಿಫ್ಟ್ ಕಾರು ಜಲಾವೃತಗೊಂಡ ಕೆಳಸೇತುವೆಯಲ್ಲಿ ಅರ್ಧ ಮುಳುಗಿತ್ತು, ಅದು ಸ್ವಿಚ್ ಆಫ್ ಆಗಿತ್ತು. ಹಿಂದಿನಿಂದ ಬಂದ ಲಾರಿ ನನ್ನ ಕಾರಿಗೆ ಡಿಕ್ಕಿ ಹೊಡೆದಿದೆ, ಇದಕ್ಕೆ ಯಾರು ಹೊಣೆ? ನನ್ನ ಕಾರನ್ನು ರಿಪೇರಿ ಮಾಡುವಂತೆ ನಾನು ಮುಖ್ಯಮಂತ್ರಿ ಬೊಮ್ಮಾಯಿ ಅವರಿಗೆ ಮನವಿ ಮಾಡುತ್ತಿದ್ದೇನೆ. ಪ್ರಧಾನಿ ಮೋದಿ ಹೆದ್ದಾರಿಯನ್ನು ಉದ್ಘಾಟಿಸಿದರು.

ಮೋದಿಗಾಗಿ ಬಿಡೆನ್ ಭೋಜನಕೂಟ

ರಸ್ತೆ ಉದ್ಘಾಟನೆಗೆ ಸಿದ್ಧವಾಗಿದೆಯೇ ಎಂಬುದರ ಬಗ್ಗೆ ಸಾರಿಗೆ ಇಲಾಖೆ ಸೇರಿದಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೊಂದಿಗೆ ಪರಿಶೀಲಿಸಿದ್ದೀರಾ? ಮತ ಬ್ಯಾಂಕ್ ರಾಜಕಾರಣಕ್ಕಾಗಿ ನಾವು ತೊಂದರೆ ಅನುಭವಿಸಬೇಕೇ? ಅವರು ಭಾರಿ ಟೋಲ್ ಶುಲ್ಕವನ್ನು ಕೇಳುತ್ತಾರೆ. ಏನು ಪ್ರಯೋಜನ ಎಂದು ವಿಕಾಸ್ ಎಂಬ ಪ್ರಯಾಣಿಕ ಪ್ರಶ್ನಿಸಿದ್ದಾರೆ.

ಬಂಪರ್ ಟು ಬಂಪರ್ ಅಪಘಾತಗಳಲ್ಲಿ ತಮ್ಮ ವಾಹನವೇ ಮೊದಲು ಎಂದು ಆಕ್ರೋಶ ವ್ಯಕ್ತಪಡಿಸಿದ ಮತ್ತೊಬ್ಬ ಪ್ರಯಾಣಿಕ ನಾಗರಾಜು, ಅಪಘಾತಗಳಿಗೆ ಯಾರು ಹೊಣೆ ಎಂದು ಪ್ರಶ್ನಿಸಿದರು. ಪ್ರಧಾನಿ ಬಂದರೆ 10 ನಿಮಿಷದಲ್ಲಿ ರಸ್ತೆಯಲ್ಲಿ ತುಂಬಿರುವ ನೀರನ್ನು ತೆರವುಗೊಳಿಸುತ್ತಿದ್ದರು ಎಂದರು.

ಕೆಳಸೇತುವೆಯಲ್ಲಿ ನೀರು ತುಂಬಲು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ, ಹಲವಾರು ಅಪಘಾತಗಳು ವರದಿಯಾದವು. ಮೊದಲು ನನ್ನದು, ನಂತರ ಏಳೆಂಟು ವಾಹನಗಳನ್ನು ಒಳಗೊಂಡ ಸರಣಿ ಬಂಪರ್-ಟು-ಬಂಪರ್ ಅಪಘಾತಗಳು ಸಂಭವಿಸಿದವು.

ಅಮಿತ್ ಶಾ ಭೇಟಿಯಾದ ರಾಮ್‍ಚರಣ್, ಚಿರಂಜಿವಿ

ನೀರು ಇಳಿಮುಖವಾಗಲು ಸ್ಥಳವಿಲ್ಲ. ನಾವು ಸಾಮಾನ್ಯ ಜನರು ಬಳಲುತ್ತಿರುವುದನ್ನು ನೀವು ನೋಡುತ್ತಿಲ್ಲವೇ? ಇದಕ್ಕೆಲ್ಲಾ ಯಾರು ಹೊಣೆ ಎಂದು ಕೆಲವು ಪ್ರಯಾಣಿಕರು ಪ್ರಶ್ನಿಸಿದ್ದಾರೆ.

Bengaluru, Mysore, Expressway, rain, flooded,

Articles You Might Like

Share This Article