ವಿಧಾನಪರಿಷತ್‌ ಚುನಾವಣೆ : ಅಚ್ಚರಿ ಬೆಳವಣಿಯಲ್ಲಿ ಸಿ.ಟಿ.ರವಿಗೆ ಬಿಜೆಪಿ ಮಣೆ

ಬೆಂಗಳೂರು,ಜೂ.2- ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯುವ ಮೂರು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಯಲ್ಲಿ , ಅಚ್ಚರಿ ಬೆಳವಣಿಗೆ ಎಂಬಂತೆ ಮಾಜಿ ಸಚಿವ ಸಿ.ಟಿ.ರವಿ ಅವರಿಗೆ ಬಿಜೆಪಿ ಮಣೆ ಹಾಕಿದೆ. ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಮೂವರು ಅಭ್ಯರ್ಥಿಗಳ ಹೆಸರನ್ನು ಘೋಷಿಸಿದ್ದು, ಮಾಜಿ ಸಚಿವ ಸಿ.ಟಿ.ರವಿ, ಹಾಲಿ ವಿಧಾನಪರಿಷತ್‌ನ ಮುಖ್ಯ ಸಚೇತಕ ಎನ್‌.ರವಿಕುಮಾರ್‌ ಹಾಗೂ ಮಾಜಿ ಶಾಸಕ, ಮರಾಠ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಂ.ಜಿ. ಮುಳೆ ಅವರನ್ನು ಕಣಕ್ಕಿಳಿಸಿದೆ. ಸಿ.ಟಿ.ರವಿ(ಒಕ್ಕಲಿಗ), ಎನ್‌.ರವಿಕುಮಾರ್‌(ಕೋಲಿ ಸಮಾಜ), ಎಂ.ಜಿ.ಮುಳೆ ಮರಾಠ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಕಳೆದ … Continue reading ವಿಧಾನಪರಿಷತ್‌ ಚುನಾವಣೆ : ಅಚ್ಚರಿ ಬೆಳವಣಿಯಲ್ಲಿ ಸಿ.ಟಿ.ರವಿಗೆ ಬಿಜೆಪಿ ಮಣೆ