ಬಿಎಂಟಿಸಿ ಪ್ರಯಾಣಿಕರೇ ಹುಷಾರ್, ನಿಮಗಾಗಿ ಕಾಯುತ್ತಿದ್ದಾರೆ ಸ್ಮಾರ್ಟ್ ಕಳ್ಳಿಯರು..!

Social Share

ಬೆಂಗಳೂರು,ಫೆ.26- ಮಹಿಳೆ ಗಮನ ಬೇರೆಡೆ ಸೆಳೆದು ಮೂವರು ಕಳ್ಳಿಯರು ಪರ್ಸ್‍ನಲ್ಲಿದ್ದ 6.5 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ಘಟನೆ ಆರ್‍ಎಂಸಿ ಯಾರ್ಡ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಗಮನ ಬೇರೆಡೆ ಸೆಳೆದು ಅವರ ಪರ್ಸ್‍ನಲ್ಲಿದ್ದ ಹಣ, ಆಭರಣ ಕಳ್ಳತನ ಮಾಡಿದ್ದಾರೆ.
ಫೆ.20ರಂದು ನಾಗರಾಬಾವಿಯ ಪಾಪರೆಡ್ಡಿಪಾಳ್ಯದ ನಿವಾಸಿ ವಾಣಿಮಂಜುನಾಥ್ ಎಂಬುವರು ತಮ್ಮ 4 ವರ್ಷದ ಮಗುವಿನೊಂದಿಗೆ ಸಂಬಂಕರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡು ಆರ್‍ಎಂಸಿಯಾರ್ಡ್ ಬಸ್ ನಿಲ್ದಾಣದಲ್ಲಿ ಕೆಂಗೇರಿ ಕಡೆಗೆ ತೆರಳುವ ಬಿಎಂಟಿಸಿ ಬಸ್ ಹತ್ತಿದ್ದಾರೆ.
ಚಾಲಾಕಿ ಕಳ್ಳಿಯರು ವಾಣಿ ಅವರನ್ನು ಹಿಂಬಾಲಿಸಿಕೊಂಡು ಪ್ರಯಾಣಿಕರಂತೆ ಅದೇ ಬಸ್ ಹತ್ತಿದ್ದಾರೆ. ವಾಣಿ ಅವರು ಸೀಟಿನಲ್ಲಿ ಕೂರುವಾಗ ಕಾಯಿನ್ ಬಿಸಾಕಿ ಅದನ್ನು ತೆಗೆದುಕೊಳ್ಳುವಂತೆ ಹೇಳಿ ಅವರ ಗಮನ ಬೇರೆಡೆ ಸೆಳೆದು ಪರ್ಸ್‍ನಲ್ಲಿದ್ದ ಹಣ, ಆಭರಣ ಕಳ್ಳತನ ಮಾಡಿ ಪರಾರಿಯಾಗಿದ್ದಾರೆ.
ಗೊರಗುಂಟೆಪಾಳ್ಯದ ಬಳಿ ವಾಣಿ ಅವರು ಅನುಮಾನಗೊಂಡು ಬ್ಯಾಗ್ ನೋಡಿಕೊಂಡಾಗ ಹಣ, ಆಭರಣ ಕಳ್ಳತನವಾಗಿರುವುದು ಗೊತ್ತಾಗಿದೆ. ಈ ಬಗ್ಗೆ ಆರ್‍ಎಂಸಿಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸುಮಾರು 6.5 ಲಕ್ಷ ರೂ. ಮೌಲ್ಯದ 125 ಗ್ರಾಂ ತೂಕದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿರುವ ಕಳ್ಳಿಯರ ಪತ್ತೆಗಾಗಿ ಪೊಲೀಸರು ಶೋಧ ಕೈಗೊಂಡಿದ್ದಾರೆ.

Articles You Might Like

Share This Article