ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಿಎಂಟಿಸಿ ಬಸ್‌‍, ಪ್ರಯಾಣಿಕರು ಸೇಫ್

ಬೆಂಗಳೂರು,ಜು.9- ಚಲಿಸುತ್ತಿದ್ದ ಬಸ್‌‍ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದ್ದು, ಚಾಲಕ ಹಾಗೂ ನಿರ್ವಾಹಕನ ಸಮಯಪ್ರಜ್ಞೆಯಿಂದ ಭಾರೀ ಅನಾಹುತ ತಪ್ಪಿದಂತಾಗಿದೆ. ಬಿಎಂಟಿಸಿ ಬಸ್‌‍ ಇಂದು ಬೆಳಗ್ಗೆ ರೋಸ್‌‍ಗಾರ್ಡನ್‌ನಿಂದ ಶಿವಾಜಿನಗರಕ್ಕೆ ಹೋಗುತ್ತಿದ್ದಾಗ ಮಾರ್ಗಮಧ್ಯೆ ಎಂಜಿರಸ್ತೆಯ ಅನಿಲ್‌ ಕುಂಬ್ಳೆ ಸಿಗ್ನಲ್‌ನಲ್ಲಿ ಬಸ್‌‍ ನಿಲ್ಲಿಸಿದ್ದಾರೆ. ಸಿಗ್ನಲ್‌ ಬಿಟ್ಟಾಗ ಬಸ್‌‍ ಸ್ಟಾರ್ಟ್‌ ಮಾಡಲು ಚಾಲಕ ಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಎರಡುಮೂರು ಸಲ ಸ್ಟಾರ್ಟ್‌ ಮಾಡಲು ಪ್ರಯತ್ನಿಸಿದಾಗಲೂ ಸಾಧ್ಯವಾಗಿಲ್ಲ. ಬಸ್‌‍ನಲ್ಲಿ ಸುಮಾರು 30 ಮಂದಿ ಪ್ರಯಾಣಿಸುತ್ತಿದ್ದರು. ನೋಡನೋಡುತ್ತಿದ್ದಂತೆ ಎಂಜಿನ್‌ನಲ್ಲಿ ಏಕಾಏಕಿ ದಟ್ಟ ಹೊಗೆ ಬಂದು … Continue reading ಇದ್ದಕ್ಕಿದ್ದಂತೆ ಹೊತ್ತಿ ಉರಿದ ಬಿಎಂಟಿಸಿ ಬಸ್‌‍, ಪ್ರಯಾಣಿಕರು ಸೇಫ್