ಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ವಿಜಯೇಂದ್ರಗೆ ಸವಾಲು

ಬೆಂಗಳೂರು,ಸೆ.13– ಆರ್ಎಸ್ಎಸ್ ನಾಯಕರ ಮಧ್ಯಪ್ರವೇಶದಿಂದಾಗಿ ಸದ್ಯ ಪರಿಸ್ಥಿತಿ ತಿಳಿಗೊಂಡಿದೆ ಎಂದು ಹೇಳಲಾಗುತ್ತಿದೆಯಾದರೂ ಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ರಾಜ್ಯಾಧ್ಯಕ್ಷ ವಿಜಯೇಂದ್ರಗೆ ಸವಾಲಾಗಿ ಪರಿಣಮಿಸಿದೆ.ಸಂಘ ಪರಿವಾರ ನಾಯಕರ ಮಧ್ಯಪ್ರವೇಶದಿಂದ ಹಾವು ಮುಂಗುಸಿಯಂತಿದ್ದ ವಿಜಯೇಂದ್ರ ಹಾಗೂ ಯತ್ನಾಳ್ ತಂಡವನ್ನು ಸದ್ಯಕ್ಕೆ ಒಗ್ಗೂಡಿಸುವಲ್ಲಿ ಆರ್ಎಸ್ಎಸ್ ನಾಯಕರು ಯಶಸ್ವಿಯಾಗಿದ್ದಾರೆ. ಪರಸ್ಪರ ಮುಖ ಕೊಟ್ಟು ಮಾತನಾಡದ ಸ್ಥಿತಿಯಲ್ಲಿದ್ದ ಬಿಜೆಪಿಯ ನಿಷ್ಠಾವಂತ ಮತ್ತು ಭಿನ್ನಮತೀಯ ನಾಯಕರು ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡುತ್ತೇವೆಂದು ಹಿರಿಯರ ಬಳಿ ವಾಗ್ದಾನ ಮಾಡಿದ್ದಾರೆ.ಆದರೆ ಯತ್ನಾಳ್ ಹಾಗೂ ಅವರ ತಂಡವನ್ನು ನಿಭಾಯಿಸಿಕೊಂಡು … Continue reading ಬಿಜೆಪಿಯೊಳಗಿನ ಮುಸುಕಿನ ಗುದ್ದಾಟಕ್ಕೆ ಕಡಿವಾಣ ಹಾಕುವುದೇ ವಿಜಯೇಂದ್ರಗೆ ಸವಾಲು