ಬೆಳಗಾವಿ,ಡಿ.20- ರಾಜಕೀಯ ವಿರೋಧಿಗಳನ್ನು ಹೆದರಿಸಲು ಕೇಂದ್ರ ಸರ್ಕಾರ ಸಿಬಿಐ ಅನ್ನು ಬಳಸಿಕೊಂಡು ದಾಳಿ ನಡೆಸುತ್ತಿದೆ. ಇದಕ್ಕೆ ನಾವು ಹೆದರುವುದಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನ ವಿರೋಧಿ ನಿಲುವುಗಳ ವಿರುದ್ಧ ಹೋರಾಟ ಮುಂದುವರೆಯಲಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರ ಒಡೆತನ ಶಿಕ್ಷಣ ಸಂಸ್ಥೆಗಳ ಮೇಲೆ ಸಿಬಿಐ ದಾಳಿ ನಡೆದಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿದೆ. ಇಡಿ ಅಂದರೆ ಎಲೆಕ್ಷನ್ ಡಿಪಾಟ್ರ್ಮೆಂಟ್ ಇದ್ದಂತೆ, ಐಟಿ ಅಂದರೆ ಬಿಜೆಪಿಯ ಇಂಜಲಿಜೆಂಟ್ ಡಿಪಾರ್ಟ್ಮೆಂಟ್ ಆಗಿ ಕೆಲಸ ಮಾಡುತ್ತಿವೆ.
ಕೇಂದ್ರ ಸರ್ಕಾರ ಸಿಬಿಐ ಅನ್ನು ಬಳಸಿಕೊಂಡು ಬಿಜೆಪಿ ವಿರೋಧಿಗಳ ಬಾಯಿ ಮುಚ್ಚಿಸುವ ಯತ್ನ ಮಾಡುತ್ತಿದೆ. ನಾವು ಅದಕ್ಕೆ ಹೆದರುವುದಿಲ್ಲ ಎಂದರು.
ಇಂಗ್ಲೆಂಡ್ನಲ್ಲಿ ರಾಜ ಕಿಂಗ್ ಚಾರ್ಲ್ಸ್ ಭಾವಚಿತ್ರವಿರುವ ಹೊಸ ನೋಟುಗಳ ಅನಾವರಣ
ಸಾವರ್ಕರ್ ಆರು ಬಾರಿ ಕ್ಷಮಾಪಣೆ ಪತ್ರ ಬರೆದವರು, ಬ್ರಿಟಿಷರ ತಟ್ಟೆ ಕಾಸಿನಲ್ಲಿ ಜೀವನ ಮಾಡಿದವರು. ದೇಶದ ಸ್ವತಂತ್ರ್ಯ ಹೋರಾಟದ ವಿರುದ್ಧ ಇದ್ದವರು. ಅಂತಹವರ ಫೋಟೊ ತಂದು ವಿಧಾನಸಭೆ ಸಭಾಂಗಣದಲ್ಲಿ ಹಾಕಲಾಗಿದೆ. ಬಿಜೆಪಿ ಪ್ರಜಾಪ್ರಭುತ್ವ, ಮತ್ತು ಸಂವಿಧಾನವನ್ನು ಬುಡಮೇಲು ಮಾಡುತ್ತಿದ್ದಾರೆ ಎಂದು ಹೇಳಿದರು.
ಸಾರ್ವರ್ಕರ್ ವಿಚಾರದಲ್ಲಿ ಪಕ್ಷದಲ್ಲಿ ಎಲ್ಲರದೂ ಒಂದೇ ಅಭಿಪ್ರಾಯ. ಡಿ.ಕೆ.ಶಿವಕುಮಾರ್ ಮತ್ತು ಸಿದ್ದರಾಮಯ್ಯ ಅವರ ನಡುವೆ ಧ್ವಂಧ್ವಗಳಿಲ್ಲ. ಇಬ್ಬರ ಹೇಳಿಕೆಗಳು ಸರಿಯಾಗಿ ಇವೆ. ನಮ್ಮಲ್ಲಿ ಯಾವುದೇ ಗೊಂದಲವಿಲ್ಲ, ಇಬ್ಬರ ನಡುವೆ ಹುಳಿ ಹಿಂಡುವುದು ಬೇಡ. ನಮ್ಮಲ್ಲಿ ಮತ ಭೇದ ಇರಬಹುದು. ಆದರೆ ಮನ ಭೇದ ಇಲ್ಲ. ಬಿಜೆಪಿಯವರು ತಮ್ಮ ಕೊಳಕು ಮರೆಮಾಚೋಕೆ ಇದನ್ನ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.
ರೈಲ್ವೆದಲ್ಲಿ ಉದ್ಯೋಗದ ಕೊಡಿಸುವುದಾಗಿ 28 ಮಂದಿಗೆ 2.67 ಕೋಟಿ ಪಂಗನಾಮ
ವಿಧಾನಸಭೆ ಚುನಾವಣೆಯ ಅಭ್ಯರ್ಥಿಗಳ ಆಯ್ಕೆ ವಿಷಯದಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ತೀರ್ಮಾನವೇ ಅಂತಿಮ. ಅದಕ್ಕೂ ಮೊದಲು ಯಾರಿಗೂ ಅಭ್ಯರ್ಥಿಗಳನ್ನು ಘೋಷಣೆ ಮಾಡಲು ಅವಕಾಶವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ನಲ್ಲಿ ಚುನಾವಣಾ ಸಮಿತಿ ಇದೆ. ಮೊದಲು ಅಲ್ಲಿ ಚರ್ಚೆಯಾಗಬೇಕು, ಆ ನಂತರ ಘೋಷಣೆಯಾಗಬೇಕು. ಅದಕ್ಕೆ ಖರ್ಗೆಯವರ ಮುದ್ರೆ ಬೀಳಬೇಕು. ಆಗ ಮಾತ್ರ ಟಿಕೆಟ್ ಅಂತಿಮವಾಗಲಿದೆ. ಅಲ್ಲಿಯವರೆಗೆ ಬೇರೆಯವರು ಮಾಡುವ ಘೋಷಣೆಗಳಿಗೆ ಮಾನ್ಯತೆ ಇಲ್ಲ ಎಂದರು.
#CentralGovt, #CBI, #Hariprasad, #DKShivakumar,