ಕಾಂಗ್ರೆಸ್ ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಲು ಇದು ಸಕಾಲ : ಜಿ-23 ನಾಯಕರು

Social Share

ನವದೆಹಲಿ, ಫೆ.16- ಹಿರಿಯ ನಾಯಕ ಅಶ್ವನಿ ಕುಮಾರ್ ಅವರು ಕಾಂಗ್ರೆಸ್‍ನಿಂದ ನಿರ್ಗಮಿಸಿರುವುದು ಪಕ್ಷದಲ್ಲಿ ಮತ್ತೊಮ್ಮೆ ತೀವ್ರ ಉದ್ವಿಗ್ನತೆಯನ್ನುಂಟುಮಾಡಿದೆ. ಈ ಬಗ್ಗೆ ಪಕ್ಷವು ಮೌನ ವಹಿಸಿದ್ದರೂ ಪಕ್ಷದೊಳಗಿನ ಜಿ-23 ಗುಂಪಿನ ನಾಯಕರು ಇದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.
ಪಕ್ಷದ ಹಿರಿಯ ಧುರೀಣ ಗುಲಾಂ ನಬಿ ಆಜಾದ ಅವರು ಪಕ್ಷದಿಂದ ನಾಯಕರು ಒಬ್ಬರ ನಂತರ ಒಬ್ಬರಂತೆ ಹೊರನಡೆಯುತ್ತಿರುವುದು ಗಂಬೀರ-ಆತಂಕದ ವಿಷಯವಾಗಿದೆ ಎಂದು ನುಡಿದಿದ್ದಾರೆ. ಆಜಾದ್, ರಾಜ್ಯಸಭೆಯಲ್ಲಿ ಕಾಂಗ್ರೆಸ್ ಉಪನಾಯಕ ಆನಂದ್ ಶರ್ಮಾ ಮತ್ತು ಲೋಕಸಭಾ ಸದಸ್ಯ ಮನೀಷ್ ತಿವಾರಿ ಅವರು ಇದು ಪಕ್ಷವು ಗಂಭೀರವಾಗಿ ಮತ್ತು ಪ್ರಾಮಾಣಿಕವಾಗಿ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಮಯ ಎಂದು ಅಭಿಪ್ರಾಯಪಟ್ಟಿದ್ದಾರೆ.
ಈ ಮೂವರೂ 2020ರ ಆಗಸ್ಟ್‍ನಲ್ಲಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾಗಾಂಧಿ ಅವರಿಗೆ ಪಕ್ಷದಲ್ಲಿ ಭಾರೀ ಬದಲಾವಣೆಗಳನ್ನು ತರಬೇಕು ಎಂದು ಪತ್ರ ಬರೆದಿದ್ದ 23 ಹಿರಿಯ ಮುಖಂಡರು ಅಥವಾ ಜಿ-23ರಲ್ಲಿ ಸೇರಿದ್ದಾರೆ.
ಪ್ರಸಕ್ತ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಫಲಿತಾಂಶ ಕಾಂಗ್ರೆಸ್ ಪರವಾಗಿ ಬರದಿದ್ದರೆ ಮಾರ್ಚ್ 10ರ ಬಳಿಕ ಪಕ್ಷವು ತೀವ್ರ ಆಂತರಿಕ ಸೋಟ ಎದುರಿಸಿದಲ್ಲಿ ಅಚ್ಚರಿಯಿಲ್ಲ ಎಂದು ಹೆಸರು ಬಹಿರಂಗಪಡಿಸಲಿಚ್ಛಿಸದ ಕೆಲವು ನಾಯಕರು ಪ್ರತಿಪಾದಿಸಿದ್ದಾರೆ.

Articles You Might Like

Share This Article