ಇಟಲಿಯಲ್ಲೂ ಕಾಂಗ್ರೆಸ್ ಜಾಗೃತಿ ಅಭಿಯಾನ ನಡೆಸುತ್ತದೆಯೇ..? : ಬಿಜೆಪಿ ಪ್ರಶ್ನೆ

Social Share

ಬೆಂಗಳೂರು,ಜು.19- ನ್ಯಾಷನಲ್ ಹೆರಾಲ್ಡ್, 2ಜಿ ಹಗರಣ, ಕಲ್ಲಿದ್ದಲು ಹಂಚಿಕೆ, ಕಾಮನ್‍ವೆಲ್ತ್ ಹಗರಣದ ಮೂಲಕ ಕಪ್ಪು ಹಣ ಸೃಷ್ಟಿಯಲ್ಲಿ ವಿಶ್ವಕ್ಕೆ ಮಾದರಿಯಾದವರು ಇಟಲಿ ಮೂಲದ ಆಂಟೋನಿಯೋ ಮೈನೋ ಉರುಫ್ ಸೋನಿಯಾ ಗಾಂಧಿ. ಹಾಗಾದರೆ ಈ ಬಗ್ಗೆ ಇಟಲಿಯಲ್ಲೂ ಕಾಂಗ್ರೆಸ್ ಜಾಗೃತಿ ಅಭಿಯಾನ ನಡೆಸುತ್ತದೆಯೇ? ಎಂದು ಬಿಜೆಪಿ ಪ್ರಶ್ನಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಬಿಜೆಪಿ, ಹಿಂದೂಗಳ ಹತ್ಯೆಯಾದಾಗ, ಸೈನಿಕರ ಮೇಲೆ ದಾಳಿಯಾದಾಗ, ತಾಲೀಬಾನಿ ಮಾದರಿಯಲ್ಲಿ ಕತ್ತು ಸೀಳಿದಾಗ ಬೀದಿಗೆ ಇಳಿಯದ ಕಾಂಗ್ರೆಸ್ ಈಗ ನಕಲಿ ಗಾಂಧಿಗಳನ್ನು ಇಡಿ ವಿಚಾರಣೆಗೆ ಕರೆದಿರುವುದನ್ನು ವಿರೋಧಿಸಿ ಬೀದಿಗೆ ಇಳಿದಿದೆ.

ನಿಮ್ಮ ಈ ಹೋರಾಟ ಭಾರತದ ಬೀದಿಗಳಿಗೆ ಮಾತ್ರ ಸೀಮಿತವೋ ಅಥವಾ ಇಟಲಿಯವರೆಗೂ ವಿಸ್ತರಣೆಯಾಗುತ್ತದೆಯೋ?
ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಹಾಗೂ ರಾಹುಲ್ ಗಾಂಧಿ ನಡೆಸಿದ ಲೂಟಿಯನ್ನು ಮನೆಗಳ್ಳತನ ಎಂದು ಹೇಳಿದರೆ ಕಾಂಗ್ರೆಸ್ಸಿಗರಿಗೆ ರೋಷ ಉಕ್ಕಬಹುದು, ಆದರೆ ಅದೇ ಸತ್ಯ!

ಈ ಮನೆಗಳ್ಳತನವನ್ನು ಸಮರ್ಥಿಸಿ ಕಾಂಗ್ರೆಸ್ ನಾಯಕರು ಪಾದಯಾತ್ರೆ ನಡೆಸುತ್ತಿರುವುದರ ಅರ್ಥವೇನು ಎಂದು ಪ್ರಶ್ನೆ ಮಾಡಿದೆ.

Articles You Might Like

Share This Article