ದೇಶ ದುರ್ಬಲಗೊಳಿಸಲು ಸಿಪಿಐ, ಕಾಂಗ್ರೆಸ್ ಹುನ್ನಾರ ನಡೆಸುತ್ತಿವೆ : ರಾಜನಾಥ್ ಸಿಂಗ್

ನವದೆಹಲಿ,ಏ.18- ಸಿಪಿಐ(ಎಂ)ಮತ್ತು ಕಾಂಗ್ರೆಸ್ ಪಕ್ಷಗಳು ದೇಶವನ್ನು ದುರ್ಬಲ ಗೊಳಿಸಲು ಪಿತೂರಿ ನಡೆಸುತ್ತಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಆರೋಪಿಸಿದ್ದಾರೆ. ಇದರ ಜೊತೆಗೆ ಸಿಪಿಐ (ಎಂ) ಚುನಾವಣಾ ಪ್ರಣಾಳಿಕೆಯು ದೇಶದಲ್ಲಿನ ಎಲ್ಲಾ ಪರಮಾಣು ಶಸಾಸಗಳನ್ನು ಕಿತ್ತೊಗೆ ಯುವ ಭರವಸೆಯ ಹಿಂದಿನ ಉದ್ದೇಶವನ್ನು ಅವರು ಪ್ರಶ್ನಿಸಿದ್ದಾರೆ. ಈ ವಿಷಯದ ಬಗ್ಗೆ ಕಾಂಗ್ರೆಸ್ನ ನಿಲುವನ್ನು ತಿಳಿಯಲು ಸಿಂಗ್ ಒತ್ತಾಯಿಸಿದರು ಮತ್ತು ನಮ್ಮ ಪರಮಾಣು ಶಸಾಸಗಳನ್ನು ನಾಶಪಡಿಸುವ ಬಗ್ಗೆ ಮಾತನಾಡುವುದು ರಾಷ್ಟ್ರೀಯ ಭದ್ರತೆಯೊಂದಿಗೆ ಆಟವಾಡುವುದಕ್ಕಿಂತ ಕಡಿಮೆಯಿಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. … Continue reading ದೇಶ ದುರ್ಬಲಗೊಳಿಸಲು ಸಿಪಿಐ, ಕಾಂಗ್ರೆಸ್ ಹುನ್ನಾರ ನಡೆಸುತ್ತಿವೆ : ರಾಜನಾಥ್ ಸಿಂಗ್