ಅರಮನೆ ಅವರಣ ಪ್ರವೇಶಿಸಿದ ಗಜಪಡೆ

ಮೈಸೂರು, ಆ.23– ನಾಡಹಬ್ಬ ದಸರಾಗೆ ಭರದ ಸಿದ್ಧತೆ ನಡೆಯುತ್ತಿದ್ದು, ಪ್ರಯಾಣ ಮಾಡಿ ವಿಶ್ರಾಂತಿಯಲ್ಲಿದ್ದ ಗಜಪಡೆ ಇಂದು ಅದ್ಧೂರಿಯಾಗಿ ಅರಮನೆ ಪ್ರವೇಶಿಸಿದೆ. ಆನೆಗಳ ಆಗಮನದಿಂದ ದಸರಾ ವೈಭವ ಸಾಂಸ್ಕೃತಿಕ ನಗರಿಯಲ್ಲಿ ಕಳೆಗಟ್ಟಿದೆ. ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ಗಜಪಡೆಗೆ ಶಾಸೋಕ್ತವಾಗಿ ಪೂಜೆ ಸಲ್ಲಿಸಿ ಅದ್ಧೂರಿಯಾಗಿ ಸ್ವಾಗತ ಕೋರಲಾಯಿತು. ವೀರನಹೊಸಳ್ಳಿ ಕ್ಯಾಂಪ್ನಿಂದ ಪ್ರಯಾಣ ಬೆಳೆಸಿ ನಗರದ ಅಶೋಕಪುರಂನ ಅರಣ್ಯ ಭವನದಲ್ಲಿ ತಂಗಿದ್ದ ಆನೆಗಳಿಗೆ ಇಂದು ಅರಣ್ಯ ಇಲಾಖೆ ವತಿಯಿಂದ ಪೂಜೆ ಸಲ್ಲಿಸಿ ಬೀಳ್ಕೊಡಲಾಯಿತು. ಅಲ್ಲಿಂದ ಕಾಲ್ನಡಿಗೆ ಮೂಲಕ ಗಜಪಡೆ ಅರಮನೆಯತ್ತ … Continue reading ಅರಮನೆ ಅವರಣ ಪ್ರವೇಶಿಸಿದ ಗಜಪಡೆ