ಓಮಿಕ್ರಾನ್ ನಿರ್ಲಕ್ಷಿಸಿದರೆ ಸಾವು ಫಿಕ್ಸ್..! : ತಜ್ಞರು ಎಚ್ಚರಿಕೆ

Social Share

ಬೆಂಗಳೂರು,ಜ.8- ಓಮಿಕ್ರಾನ್ ಮಾರಣಾಂತಿಕವಲ್ಲ ಎಂಬ ನಿರ್ಲಕ್ರ್ಷಿಸಬೇಡಿ ಸ್ವಲ್ಪ ಹೆಚ್ಚುಕಮ್ಮಿಯಾದರೂ ಪ್ರಾಣ ಪಕ್ಷಿ ಹಾರಿಹೋಗಬಹುದು ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ. ಕೇವಲ ನೆಗಡಿ ಜ್ವರ ಬಂದು ಹೋಗುವ ಓಮಿಕ್ರಾನ್ ಬಗ್ಗೆ ನಿರ್ಲಕ್ಷ್ಯ ತೋರುತ್ತಿರುವುದರಿಂದ ಈಗಾಗಲೆ ಆಸ್ಪತ್ರೆ ಸೇರುತ್ತಿರುವ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿದೆ.
ಮೊದಲು ಜ್ವರ, ಕೆಮ್ಮು ನೆಗಡಿಯಂತ ಲಕ್ಷಣಗಳು ಕಾಣಿಸಿಕೊಂಡ ಕೂಡಲೆ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿಕೊಳ್ಳುವುದು ಸೂಕ್ತ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟ್ರೈಡೋಸ್.ಕೇವಲ ಜ್ವರ ನೆಗಡಿ ಎಂದು ಮೈಮರೆತರೆ ಅಪಾಯ ಕಟ್ಟಿಟ್ಟಬುತ್ತಿ ಎಂದು ಅವರು ಎಚ್ಚರಿಸಿದ್ದಾರೆ.
ಓಮಿಕ್ರಾನ್ ಸೋಂಕಿನಿಂದ ಬಚಾವ್ ಆಗಬೇಕಾದರೆ ಪ್ರತಿಯೊಬ್ಬರು ಕೊರೊನಾ ಲಸಿಕೆ ಹಾಕಿಸಿಕೊಳ್ಳುವುದು ಅತ್ಯಗತ್ಯ ಎಂದು ಅವರು ಸಲಹೆ ನೀಡಿದ್ದಾರೆ.

Articles You Might Like

Share This Article