ಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಬಿಡುಗಡೆ

ಬೆಂಗಳೂರು,ಅ.27- ಸಾಮಾಜಿಕ ತಲ್ಲಣ ಹಾಗೂ ಹೋರಾಟದ ಹಿನ್ನಲೆಯ ಕಥಾಹಂದರವನ್ನು ಹೊಂದಿರುವ ಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಅನ್ನು ನಟ, ನಿರ್ಮಾಪಕ, ನಿರ್ದೇಶಕ ವಿಜಯ್‌ಕುಮಾರ್‌ ಅನಾವರಣಗೊಳಿಸಿದರು. ನಗರದ ಪ್ರಸನ್ನ ಥಿಯೇಟರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಎಚ್‌.ಆಂಜನೇಯ, ಕಾಂಗ್ರೆಸ್‌‍ ಮುಖಂಡ ಸುಧೀರ್‌ ಕುಮಾರ್‌ ಮುರೋಳಿ, ಅಭಿಮಾನಿ ಸಂಸ್ಥೆಯ ಅನಿಲ್‌ ಹೊಸಕೊಪ್ಪ, ಸಾಮಾಜಿಕ ಕಾರ್ಯಕರ್ತರಾದ ಭಾಸ್ಕರ್‌ ಪ್ರಸಾದ್‌, ಹರಿರಾಂ, ನಿರ್ದೇಶಕ ಕರ್ಣನ್‌(ಅರುಣ್‌), ನಾಯಕನಟ ರಾಕೇಶ್‌ ದಳವಾಯಿ ಮತ್ತಿತರರು ಉಪಸ್ಥಿತರಿದ್ದರು. ದುನಿಯಾ ವಿಜಯ್‌ ಮಾತನಾಡಿ, ಗೂಗಲ್‌ನಿಂದಲೇ ಎಲ್ಲವನ್ನೂ ತಿಳಿದುಕೊಳ್ಳಬಹುದು ಎಂಬ ಆಧುನಿಕ … Continue reading ಧೀರ ಭಗತ್‌ರಾಯ್‌ ಚಿತ್ರದ ಟ್ರೈಲರ್‌ ಬಿಡುಗಡೆ