ಬೆಂಗಳೂರು, ಫೆ.7- ಕಳ್ಳತನವಾಗಿದ್ದ ಲುಂಬಿನಿ ಗಾರ್ಡನ್ನಲ್ಲಿನ ವರನಟ ಡಾ.ರಾಜ್ಕುಮಾರ್ ಪುತ್ಥಳಿಯನ್ನು ಅಮೃತಹಳ್ಳಿ ಠಾಣೆ ಪೊಲೀಸರು ಪತ್ತೆಹಚ್ಚಿದ್ದಾರೆ. ಈ ಸಂಬಂಧ ಇಬ್ಬರು ಯುವಕರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ನಾಗವಾರ ಕೆರೆಯ ಲುಂಬಿನಿ ಗಾರ್ಡನ್ನಲ್ಲಿ ವರನಟ ಡಾ.ರಾಜ್ಕುಮಾರ್ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗಿತ್ತು. ಕಳೆದ 24ರಂದು ಈ ಪುತ್ಥಳಿ ಕಳ್ಳತನವಾಗಿರುವ ಬಗ್ಗೆ ಅರಣ್ಯ ವೀಕ್ಷಕರಾದ ಸಿ.ಕೆ.ರಾಜು ಎಂಬುವರು ತಕ್ಷಣ ಮೇಲಧಿಕಾರಿ ಯೋಗೇಶ್ ಅವರ ಗಮನಕ್ಕೆ ತಂದರು.
ಈ ಬಗ್ಗೆ ಯೋಗೇಶ್ ಅವರು ದೂರು ನೀಡಿದ್ದು,
ಅಮೃತಹಳ್ಳಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಪ್ರದೇಶದ ಸುತ್ತಮುತ್ತಲಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿ ಇಬ್ಬರು ಯುವಕರನ್ನು ವಶಕ್ಕೆ ಪಡೆದು ಡಾ.ರಾಜ್ ಪುತ್ಥಳಿಯನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ. ಯಾವ ಕಾರಣಕ್ಕಾಗಿ ವರನಟ ಡಾ.ರಾಜ್ ಪುತ್ಥಳಿಯನ್ನು ಇವರಿಬ್ಬರು ಕಳ್ಳತನ ಮಾಡಿದ್ದರು ಎಂಬ ವಿವರವನ್ನು ಪೊಲೀಸರು ಪಡೆದುಕೊಳ್ಳುತ್ತಿದ್ದಾರೆ.
