ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಭೂಕಂಪನ

ಛತ್ರಪತಿ ಸಂಭಾಜಿನಗರ, ಜು.10 (ಪಿಟಿಐ) ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಇಂದು ಬೆಳಗ್ಗೆ 4.5 ತೀವ್ರತೆಯ ಭೂಕಂಪ ಸಂಭವಿಸಿದ್ದು, ನಾಂದೇಡ್‌, ಪರ್ಭಾನಿ, ಛತ್ರಪತಿ ಸಂಭಾಜಿನಗರ ಮತ್ತು ವಾಶಿಂ ಜಿಲ್ಲೆಗಳಲ್ಲಿಯೂ ಇದರ ಪರಿಣಾಮ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಅಥವಾ ಆಸ್ತಿ ನಷ್ಟದ ಬಗ್ಗೆ ವರದಿಯಾಗಿಲ್ಲ ಎಂದು ಅವರು ತಿಳಿಸಿದ್ದಾರೆ. ಇಂದು ಬೆಳಗ್ಗೆ 7.14ಕ್ಕೆ ಭೂಕಂಪನದ ಕೇಂದ್ರ ಬಿಂದು ಹಿಂಗೋಳಿಯ ಕಾಳಮ್ನೂರಿ ತಾಲೂಕಿನ ರಾಮೇಶ್ವರ ತಾಂಡಾದಲ್ಲಿ ದಾಖಲಾಗಿದೆ ಎಂದು ನಾಂದೇಡ್‌ ಜಿಲ್ಲಾಡಳಿತದ ಅಧಿಕಾರಿಯೊಬ್ಬರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. … Continue reading ಮಹಾರಾಷ್ಟ್ರದ ಹಿಂಗೋಲಿಯಲ್ಲಿ ಭೂಕಂಪನ