Friday, March 29, 2024
Homeಅಂತಾರಾಷ್ಟ್ರೀಯನೇಪಾಳ ಭೂಕಂಪ : ನೆಲೆ ಕಳೆದುಕೊಂಡು ನರಳುತ್ತಿರುವ ಜನ, ನೆರವಿಗೆ ಅಧಿಕಾರಿಗಳ ಹರಸಾಹಸ

ನೇಪಾಳ ಭೂಕಂಪ : ನೆಲೆ ಕಳೆದುಕೊಂಡು ನರಳುತ್ತಿರುವ ಜನ, ನೆರವಿಗೆ ಅಧಿಕಾರಿಗಳ ಹರಸಾಹಸ

ಕಠ್ಮಂಡು, ನ.5- ಪ್ರಬಲ ಭೂಕಂಪವು 157 ಜನರನ್ನು ಬಲಿ ತೆಗೆದುಕೊಂಡ ಬಳಿಕ ಪಶ್ಚಿಮ ನೇಪಾಳದ ಪರ್ವತ ಪ್ರದೇಶದ ಜನರು ಸೂರಿಲ್ಲದೆ ರಾತ್ರಿ ಇಡೀ ಕೊರೆಯುವ ಚಳಿಯಲ್ಲಿ ಕಳೆಯುವಂತಾದ್ದು, ಸಂತ್ರಸ್ತರ ನೆರವಿಗೆ ಧಾವಿಸಲು ನೇಪಾಳದ ಅಧಿಕಾರಿಗಳು ಹರಸಾಹಸ ಪಟ್ಟಿದ್ದಾರೆ.

ಅನಾಹುತವನ್ನು ಎದುರಿಸಲು ಅಸಮರ್ಪಕ ವಿಧಾನಗಳಿಂದ ಪರಿಸ್ಥಿತಿ ಅಸ್ತವ್ಯಸ್ತವಾದ್ದು, ಕಡಿಮೆ ಸಂಪನ್ಮೂಲ ಮತ್ತು ಕಳಪೆ ಸುಸಜ್ಜಿತ ಜಿಲ್ಲಾ ಆಸ್ಪತ್ರೆಗಳು ಸಂಕಷ್ಟದಲ್ಲಿದೆ. ಜಾಜರಕೋಟ್‍ನ ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಹರಿಶ್ಚಂದ್ರ ಶರ್ಮಾ ಮಾತನಾಡಿ, ಕಠ್ಮಂಡು ಮತ್ತು ಸುರ್ಖೇತ್‍ನಿಂದ ಹೆಚ್ಚಿನ ವೈದ್ಯರು ಮತ್ತು ವೈದ್ಯಕೀಯ ತಂಡಗಳು ಆಗಮಿಸುವುದರೊಂದಿಗೆ ಪರಿಸ್ಥಿತಿ ಹೆಚ್ಚಾಗಿ ನಿಯಂತ್ರಣಕ್ಕೆ ಬಂದಿದೆಯಾದರೂ ಆಸ್ಪತ್ರೆಯಲ್ಲಿ ಅಪಾರ ಸಂಖ್ಯೆಯ ಸಂತ್ರಸ್ತರನ್ನು ಎದುರಿಸಲು ಮಾನವ ಸಂಪನ್ಮೂಲ ಮತ್ತು ಸಲಕರಣೆಗಳ ಕೊರತೆಯಿದೆ ಎಂದಿದ್ದಾರೆ.

ಭೂಕಂಪ ಸಂತ್ರಸ್ತರ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಂಡಿದ್ದು, ಇಂದಿನಿಂದ ಪರಿಹಾರ ವಿತರಣೆ ಆರಂಭವಾಗಲಿದೆ. ಶುಕ್ರವಾರ ರಾತ್ರಿಯಿಂದಲೇ ರಕ್ಷಣಾ ಕಾರ್ಯಗಳು ಆರಂಭವಾಗಿ ಮುಕ್ತಾಯಗೊಂಡಿದೆ ಎಂದು ಎಂದು ಜಾಜರ್‍ಕೋಟ್‍ನ ಮುಖ್ಯ ಜಿಲ್ಲಾ ಅಕಾರಿ ಸುರೇಶ್ ಸುನರ್ ಖಚಿತಪಡಿಸಿದ್ದಾರೆ.

ಧೈರ್ಯ ಮತ್ತು ದಕ್ಷತೆಯೇ ಪ್ರತಿಮಾ ಪ್ರಾಣಕ್ಕೆ ಮುಳುವಾಯ್ತಾ..?

1,000ಕ್ಕೂ ಹೆಚ್ಚು ಮನೆಗಳು ಪರಿಣಾಮವನ್ನು ಎದುರಿಸುತ್ತಿವೆ. ಇದರ ಪರಿಣಾಮವಾಗಿ ಲಕ್ಷಾಂತರ ಮೌಲ್ಯದ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಶುಕ್ರವಾರ ರಾತ್ರಿ ಸಂಭವಿಸಿದ ಭೂಕಂಪದಲ್ಲಿ ಜಾಜರ್ಕೋಟ್ ಅತಿ ಹೆಚ್ಚು ಹಾನಿಯನ್ನು ಅನುಭವಿಸಿದೆ, ಜಾಜರ್ಕೋಟ್ ಒಂದರಲ್ಲೇ 105 ಸಾವುನೋವುಗಳು ವರದಿಯಾಗಿವೆ.

ಮುಂದುವರೆದ ರಕ್ಷಣಾ ಕಾರ್ಯಚರಣೆ: ನೇಪಾಳ ಸೇನೆ, ಸಶಸ್ತ್ರ ಪೊಲೀಸ್ ಪಡೆ ಮತ್ತು ನೇಪಾಳ ಪೊಲೀಸರ ಸುಮಾರು 4,000 ಸಿಬ್ಬಂದಿಯನ್ನು ಜಜರ್ಕೋಟ್ ಮತ್ತು ರುಕುಮ್ ಜಿಲ್ಲೆಗಳ ಕೆಲವು ಭಾಗಗಳಲ್ಲಿ ರಕ್ಷಣಾ ಕಾರ್ಯಾಚರಣೆಗಾಗಿ ನಿಯೋಜಿಸಲಾಗಿದೆ. ನೇಪಾಳ ರೆಡ್ ಕ್ರಾಸ್ ಸೊಸೈಟಿ ಮತ್ತು ಇತರ ಸಂಸ್ಥೆಗಳಿಂದ ಹತ್ತಾರು ಸ್ವಯಂಸೇವಕರನ್ನು ಸಜ್ಜುಗೊಳಿಸಲಾಗಿದೆ.

ನಾವು ಪ್ರಾಥಮಿಕವಾಗಿ ಮೊದಲ ದಿನದಲ್ಲಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಗಳ ಮೇಲೆ ಕೇಂದ್ರೀಕರಿಸಿದ್ದೇವೆ. ಮೊದಲ 72 ಗಂಟೆಗಳನ್ನು ಯಶಸ್ವಿ ರಕ್ಷಣೆಗಾಗಿ ಸುವರ್ಣ ಅವ ಎಂದು ಪರಿಗಣಿಸಲಾಗಿರುವುದರಿಂದ, ನಾವು ಇನ್ನೂ ಕೆಲವು ದಿನಗಳವರೆಗೆ ಹುಡುಕಾಟ ಮತ್ತು ರಕ್ಷಣೆಗೆ ಆದ್ಯತೆ ನೀಡುತ್ತೇವೆ ಎಂದು ನೇಪಾಳ ಸೇನಾ ವಕ್ತಾರ ಬ್ರಿಗೇಡಿಯರ್ ಜನರಲ್ ಕೃಷ್ಣ ಭಂಡಾರಿ ತಿಳಿಸಿದ್ದಾರೆ.

ವೈದ್ಯಕೀಯ ಮತ್ತು ವಾಯುಯಾನ ತಂಡಗಳು ಸೇರಿದಂತೆ ಮೂರು ಬೆಟಾಲಿಯನ್‍ಗಳ ಸಿಬ್ಬಂದಿಯನ್ನು ಭೂಕಂಪದಿಂದ ಹೆಚ್ಚು ಹಾನಿಗೊಳಗಾದ ಎರಡು ಜಿಲ್ಲೆಗಳಿಗೆ ಕಳುಹಿಸಲಾಗಿದೆ. ಒಂದು ಬೆಟಾಲಿಯನ್ 800 ರಿಂದ 1,000 ಸಿಬ್ಬಂದಿಯನ್ನು ಹೊಂದಿದೆ. ಸಜ್ಜುಗೊಂಡ ಅನೇಕ ಸೈನಿಕರು ಜನರಿಗೆ ಕುಸಿದ ರಚನೆಗಳನ್ನು ಹುಡುಕಲು ಮತ್ತು ತ್ವರಿತ ಪ್ರತಿಕ್ರಿಯೆಗಳನ್ನು ನೀಡಲು ತರಬೇತಿ ಪಡೆದಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಭೂಕಂಪದ ಕುರಿತು ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ನಡೆಸಲು ಲೈಂಚೌರ್‍ನ ರಾಷ್ಟ್ರೀಯ ಭೂಕಂಪದ ಮಾನಿಟರಿಂಗ್ ಮತ್ತು ರಿಸರ್ಚ್ ಸೆಂಟರ್‍ನ ಭೂಕಂಪನ ತಜ್ಞರ ತಂಡವು ಜಾಜರ್‍ಕೋಟ್‍ಗೆ ತಲುಪಿದೆ.

ಸಂಪುಟ ಸಭೆ:
ಕಠ್ಮಂಡುವಿನಿಂದ ಪಶ್ಚಿಮಕ್ಕೆ 500 ಕಿಮೀ ದೂರದಲ್ಲಿರುವ ಜಾಜರ್‍ಕೋಟ್ ಜಿಲ್ಲೆಯಲ್ಲಿ ಮೊನ್ನೆ ರಾತ್ರಿ ಭೂಕಂಪಿಸಿ ನೂರಾರು ಮನೆಗಳನ್ನು ನಾಶವಾಗಿವೆ. ದುರಂತದಲ್ಲಿ ಮೃತಪಟ್ಟ ಒಟ್ಟು 157 ಜನರ ಪೈಕಿ ಇದುವರೆಗೆ 120 ಮಂದಿಯ ಮೃತದೇಹಗಳನ್ನು ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗಿದೆ. ಭೂಕಂಪದಲ್ಲಿ ಸುಮಾರು 253 ಜನರು ಗಾಯಗೊಂಡಿದ್ದಾರೆ.
ಭೂಕಂಪದಿಂದ ಬದುಕುಳಿದವರಿಗೆ ವಿಶೇಷ ಪರಿಹಾರ ಪ್ಯಾಕೇಜ್ ಕುರಿತು ನಿರ್ಧರಿಸಲು ಪ್ರಧಾನಿ ಪುಷ್ಪ ಕಮಲ್ ದಹಾಲ್ ಪ್ರಚಂಡ ಸಂಪುಟ ಸಭೆ ನಡೆಸಿದ್ದಾರೆ.

ಪಶ್ಚಿಮ ನೇಪಾಳದಲ್ಲಿ ವಿಶೇಷವಾಗಿ ಜಜರ್ಕೋಟ್ ಮತ್ತು ಪಶ್ಚಿಮ ರುಕುಮ್ ಜಿಲ್ಲೆಗಳಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದ ಹಿನ್ನೆಲೆಯಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಳು ಮತ್ತು ಪರಿಹಾರ ವಿತರಣೆ ಸೇರಿದಂತೆ ಇತರ ನಿರ್ವಹಣೆಗಾಗಿ ವಿದೇಶಿ ಸಹಾಯವನ್ನು ಪಡೆಯಲು ಆತುರವಿಲ್ಲ ಎಂದು ಸರ್ಕಾರ ಹೇಳಿದೆ.

ಇಂದು ಬೆಳಿಗ್ಗೆ ಸಚಿವ ಸಂಪುಟ ಸಭೆ ನಡೆಸಿ ಸೂಕ್ತ ನಿರ್ಧಾರದೊಂದಿಗೆ ಅಗತ್ಯ ಪರಿಹಾರ ಕಾರ್ಯಗಳನ್ನು ಕೈಗೊಂಡಿರುವುದಾಗಿ ಪ್ರಚಂಡ ತಿಳಿಸಿದ್ದಾರೆ. ನಿನ್ನೆ ಸಂಜೆಯಿಂದಲೇ ಹೊದಿಕೆಗಳು, ಬಟ್ಟೆ ಮತ್ತು ಆಹಾರ ಪದಾರ್ಥಗಳಂತಹ ಪರಿಹಾರ ಸಾಮಗ್ರಿಗಳನ್ನು ಒದಗಿಸಲಾಗುತ್ತಿದೆ. ವಿವಿಧ ಸಂಸ್ಥೆಗಳು ನೀಡಿದ ಪರಿಹಾರ ಸಾಮಗ್ರಿಗಳ ವಿತರಣೆಯನ್ನು ಸಹ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

RELATED ARTICLES

Latest News