ಶ್ರೀಲಂಕಾದಿಂದ ವಲಸೆ ಬಂದ 8 ಮಂದಿ ರಕ್ಷಣೆ

Social Share

ಚೆನ್ನೈ,ಆ.22-ರಾಮೇಶ್ವರಂ ಬಳಿಯ ಮಿನಿದ್ವೀಪದಿಂದ ಎರಡು ತಿಂಗಳ ಮಗು ಸೇರಿದಂತೆ ಶ್ರೀಲಂಕಾದಿಂದ ಬಂದ 8 ಮಂದಿ ವಲಸಿಗರನ್ನು ಕೋಸ್ಟ್‍ಗಾರ್ಡ್ ಅಧಿಕಾರಿಗಳು ರಕ್ಷಿಸಿದ್ದಾರೆ. ನಿನ್ನೆ ರಾತ್ರಿ ಎಂಟು ಜನರು ದ್ವೀಪದಲ್ಲಿ ಸಿಲುಕಿಕೊಂಡಿದ್ದರು ನಂತರ ಅಧಿಕಾರಿಗಳು ಹೋವರ್‍ಕ್ರಾಫ್ಟ್ ಬಳಸಿ ಅವರನ್ನು ರಕ್ಷಿಸಿ ರಾಮೇಶ್ವರಂಗೆ ಕರೆತಂದಿದ್ದಾರೆ.

ಆಶ್ರಯ ಬಯಸಿ ಜಾಫ್ನಾದಿಂದ ಬಂದ ಕುಟುಂಬ ಮತ್ತು ಕಿಲಿನೊಚ್ಚಿಯ ಇನ್ನೊಬ್ಬರು ಸೇರಿದಂತೆ 8 ಮಂದಿ ನಿನ್ನೆ ಶ್ರೀಲಂಕಾದಿಂದ ಹೊರಟು ಧನುಷ್ಕೋಡಿ ಬಳಿಯ ಮಿನಿ-ಸ್ಯಾಂಡ್ ದ್ವೀಪ ತಲುಪಿದ್ದಾರೆ.

ಇದೀಗ ಸಿಜಿ ಅಧಿಕಾರಿಗಳು ಅವರನ್ನು ರಕ್ಷಿಸಿ. ಅವರನ್ನು ಮೆರೈನ್ ಪೊಲೀಸರಿಗೆ ಹಸ್ತಾಂತರಿಸಲಾಗಿದ್ದು, ಅಲ್ಲಿ ವಿಚಾರಣೆ ನಡೆಸಿ ನಂತರ ಮಂಡಪಂ ಶಿಬಿರಕ್ಕೆ ಕಳುಹಿಸಲಾಗಿದೆ.

ಶ್ರೀಲಂಕಾದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನಿಂದಾಗಿ ಅಲ್ಲಿನ ಹಲವಾರು ನಾಗರಿಕರು ತಮ್ಮ ದೇಶ ತೊರೆದಿದ್ದಾರೆ. ಶ್ರೀಲಂಕಾದ ಅನೇಕ ತಮಿಳಿಗರು ಸಮುದ್ರ ದಾಟಿ ತಮಿಳುನಾಡು ತೀರಕ್ಕೆ ಬಂದು ಆಶ್ರಯ ಪಡೆದಿದ್ದಾರೆ. ಮಾರ್ಚ್‍ನಿಂದ ಸುಮಾರು 150 ಶ್ರೀಲಂಕಾ ತಮಿಳರು ರಾಮೇಶ್ವರಂ ಬೀಚ್‍ಗೆ ಆಗಮಿಸಿದ್ದಾರೆ.

Articles You Might Like

Share This Article