ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯನ್ನು ಬಂದ್ ಮಾಡಿದ ಒಂಟಿ ಸಲಗ

ಚಿಕ್ಕಮಗಳೂರು,ಜೂ.13– ದಿಢೀರ್‌ ಪ್ರತ್ಯಕ್ಷವಾದ ಒಂಟಿ ಸಲಗ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯಲ್ಲೆ ಬೀಡುಬಿಟ್ಟದ್ದರಿಂದ ಧರ್ಮಸ್ಥಳದ ಕಡೆ ಹೋಗುವ ಹಾಗೂ ಚಿಕ್ಕಮಗಳೂರು ಕಡೆ ಬರುವ ವಾಹನಗಳು ನಿಂತಲ್ಲೇ ನಿಲ್ಲಬೇಕಾಯಿತು. ಚಾರ್ಮುಡಿ ಘಾಟ್ನ 8ನೇ ತಿರುವಿನ ಬಳಿ ಈ ಘಟನೆ ನಡೆದಿದ್ದು, ನಿನ್ನೆ ರಾತ್ರಿ ಧರ್ಮಸ್ಥಳಕ್ಕೆ ತೆರಳುತ್ತಿದ್ದ ಬಸ್‌‍ ಮುಂಭಾಗ ದಿಢೀರ್‌ ಪ್ರತ್ಯಕ್ಷವಾದ ಸಲಗವನ್ನು ಕಂಡ ಕೆಎಸ್‌‍ಆರ್‌ಟಿಸಿ ಬಸ್‌‍ ಚಾಲಕ ಬಸ್‌‍ ನಿಲ್ಲಿಸಿದ್ದಾರೆ. ಒಮೆಲೇ ಬಸ್‌‍ ನಿಂತಿದ್ದನ್ನು ಕಂಡು ನಿದ್ದೆಯ ಮಂಪರಿನಲ್ಲಿದ್ದ ಪ್ರಯಾಣಿಕರು ಬೆಚ್ಚುಬಿದ್ದಿದ್ದಾರೆ. ಬಸ್‌‍ ಮುಂದೆ … Continue reading ಒಂದು ಗಂಟೆಗೂ ಹೆಚ್ಚು ಕಾಲ ರಸ್ತೆಯನ್ನು ಬಂದ್ ಮಾಡಿದ ಒಂಟಿ ಸಲಗ