10 ದಿನ ಕಳೆದರೂ ಪತ್ತೆಯಾಗಿಲ್ಲ ರೇಣುಕಾಸ್ವಾಮಿ ಮೊಬೈಲ್‌, ರಾಜಕಾಲುವೆಯಲ್ಲಿ ಹುಡುಕಾಟ

ಬೆಂಗಳೂರು, ಜೂ.17- ಚಿತ್ರ ನಟ ದರ್ಶನ್‌ ಗ್ಯಾಂಗ್‌ನಿಂದ ಕೊಲೆಯಾದ ಚಿತ್ರದುರ್ಗದ ರೇಣುಕಾಸ್ವಾಮಿಯ ಮೊಬೈಲ್‌ 10 ದಿನಗಳು ಕಳೆದರೂ ಪತ್ತೆಯಾಗಿಲ್ಲ. ಸುಮನಹಳ್ಳಿಯ ಮೋರಿಗೆ ಮೊಬೈಲ್‌ ಬಿಸಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿ ಮೇರೆಗೆ ಪೊಲೀಸರು ರಾಜಕಾಲುವೆಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ರೇಣುಕಾಸ್ವಾಮಿ ಅವರನ್ನು ಜೂ.8ರಂದು ಚಿತ್ರದುರ್ಗದಿಂದ ನಗರಕ್ಕೆ ಅಪಹರಿಸಿಕೊಂಡು ಕರೆ ತಂದಿದ್ದರು. ಅಂದು ಬೆಳಗ್ಗೆ ಚಿತ್ರದುರ್ಗದಲ್ಲಿ ರೇಣುಕಾಸ್ವಾಮಿ ಮೊಬೈಲ್‌ ಸ್ವಿಚ್‌ ಆಫ್‌ ಆಗಿತ್ತು. ಮಧ್ಯಾಹ್ನದ ವೇಳೆಗೆ ಆರ್‌ಆರ್‌ ನಗರದಲ್ಲಿ ಮತ್ತೆ ಮೊಬೈಲ್‌ ಸ್ವಿಚ್‌ ಆನ್‌ ಮಾಡಲಾಗಿದೆ. ಸಂಜೆ ವೇಳೆಗೆ … Continue reading 10 ದಿನ ಕಳೆದರೂ ಪತ್ತೆಯಾಗಿಲ್ಲ ರೇಣುಕಾಸ್ವಾಮಿ ಮೊಬೈಲ್‌, ರಾಜಕಾಲುವೆಯಲ್ಲಿ ಹುಡುಕಾಟ