ಜನರಲ್ಲಿ ಆತಂಕ ಹುಟ್ಟಿಸಿದ ನೆಗಡಿ..ಕೆಮ್ಮು..ಜ್ವರ..!

Social Share

-ದೇವಿಮಂಜುನಾಥ್, ಗೌರಿಬಿದನೂರು
ತಾಲೂಕಿನಾಧ್ಯಂತ ಮನೆ-ಮನೆಗಳಲ್ಲಿ ಜನ ಶೀತ, ನೆಗಡಿ, ಕೆಮ್ಮು, ಮೈ-ಕೈ ನೋವು, ಜ್ವರದಿಂದ ಬಳಲುತ್ತಿರುವುದು ಸಾಮಾನ್ಯವಾಗಿದ್ದು, ಹವಾಮಾನ ಬದಲಾವಣೆಯಿಂದ ಉಂಟಾಗಿರುವ ಸಮಸ್ಯೆ ಇದಾಗಿದ್ದು, ಸಾರ್ವಜನಿಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ.
ಜ್ವರ , ಗಂಟಲು ನೋವುಗಳು ಕೋವಿಡ್ ಅಲ್ಲ, ಹೆಚ್ಚಿನವು ಸಾಮನ್ಯ ಶೀತ ಜ್ವರವೇ ಆಗಿರುತ್ತವೆ. ತಾಲೂಕಿನಲ್ಲಿ ದಿನೇ ದಿನೆ ಶೀತ , ಕೆಮ್ಮು, ಮೈ-ಕೈ ನೋವು ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದರಿಂದ 10 ಮದಿಯಲ್ಲಿ 8 ಮಂದಿಗೆ ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳುತ್ತಿವೆ.
ಸಾರ್ವಜನಿಕರು ಇದನ್ನೇ ಕೊರೊನಾ ಇರಬಹುದು ಎಂದು ಮಾನಸಿಕವಾಗಿ ಬಾಸುವಂತಾಗಿದ್ದು, ಇದರಿಂದ ಗ್ರಾಮೀಣ ಭಾಗಗಳಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ನಗರದಲ್ಲಿನ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ನಗರದಲ್ಲಿನ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲೇ ಕೆಮ್ಮು, ನೆಗಡಿ, ಜ್ವರ ತಪಾಸಣೆ ಮಾಡಿಸುವವರೇ ಹೆಚ್ಚಾಗಿದ್ದಾರೆ. ಇನ್ನೂ ಚಿಕ್ಕ ಮಕ್ಕಳಿಲ್ಲಿ ಈ ಶೀತ ಬಧೆ ಹೆಚ್ಚಾಗಿ ಕಾಣಿಸಿಕೊಂಡಿದೆ.
ಋತುಮಾನ ಬದಲಾವಣೆ: ಋತುಮಾನ ಬದಲಾವಣೆಯಿಂದಲೂ ಕೆಮ್ಮು, ಶೀತ, ಜ್ವರ ಹಾಗೂ ನೆಗಡಿ ಬರುತ್ತದೆ. ಇದೇ ಋತುವಿನಲ್ಲಿ ಕೋವಿಡ್ ಸೋಂಕು ಉಲ್ಭಣಗೊಂಡಿರುವುದರಿಂದ ಅದರ ಲಕ್ಷಣಗಳು ಋತುಮಾನಕ್ಕೆ ಅನುಸಾರವಾಗಿ ಬರುವ ಕಾಯಿಲೆಯ ಸೋಂಕಿಗೂ ಸಾಮ್ಯತೆ ಇದೆ, ಶೀತಗಾಳಿ, ವಾತಾವರಣ ಬದಲಾವಣೆಯಿಂದ ಆರೋಗ್ಯವಂತರೂ ಸಹ ತಕ್ಷಣ ಕಾಯಿಲೆಗೆ ತುತ್ತಾಗುತ್ತಿದ್ದಾರೆ.
# ಗುಣಮುಖ:
ಸಾಮಾನ್ಯವಾಗಿ ಶೀತದಿಂದ ಜ್ವರ ನಗಡಿ ಕೆಮ್ಮು ಬಂದಲ್ಲಿ ಮನೆಯಲ್ಲೇ ಕಷಾಯ ಹಾಗೂ ಪ್ಯಾರಾಸಿಟಮಾಲ್, ಅಥವಾ ಡೋಲೋ ತೆಗೆದುಕೊಂಡರೆ ಸಾಕು. ಮೂರು ದಿನಗಳಲ್ಲಿ ಗುಣಮುಖವಾಗುತ್ತದೆ. 3ನೇ ದಿನದ ನಂತರವೂ ನಿರಂತರವಾಗಿ ಜ್ವರ ಕಾಣಿಸಿಕೊಂಡಲ್ಲಿ ಆಗ ಮಾತ್ರ ಆಸ್ಪತ್ರೆಗೆ ಬಂದು ತಪಾಸಣೆ ಮಾಡಿಸಿಕೊಳ್ಳಬೇಕು.
ಕೋವಿಡ್ ಪರೀಕ್ಷೆಯನ್ನು ಮಾಡಿಸಿಕೊಳ್ಳುವುದು ಉತ್ತಮ, ಕೋವಿಡ್ ದೃಢಪಟ್ಟಲ್ಲಿ ಮನೆಯಲ್ಲಿ 7 ದಿನಗಳ ಹೋಂಕ್ವಾರಂಟೈನ್ ಅಗಿ ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳುವ ಮೂಲಕ ಗುಣಮುಖರಾಗಬಹುದಾಗಿದೆ ಎಂಬುದು ವೈದ್ಯರ ಸಲಹೆಯಾಗಿದೆ.
# ಎಚ್ಚರ:
ಬಿಪಿ, ಶುಗರ್, ಹೃದಯ ಸಂಬಂದಿ ಕಾಯಿಲೆ ಹೊಂದಿರುವವರು ನೆಗಡಿ, ಕೆಮ್ಮು, ಜ್ವರ ಕಾಣಿಸಿಕೊಂಡಲ್ಲಿ ಮುನ್ನೆಚ್ಚರಿಕೆ ವಹಿಸಬೇಕು. ಸೂಕ್ತ ಚಿಕಿತ್ಸೆಯನ್ನು ಪಡೆದುಕೊಳ್ಳಬೇಕು. ಜತೆಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಲಿ ಆಸ್ಪತ್ರೆಗೆ ದಾಖಲಾಗಬೇಕು. 60 ವರ್ಷ ಮೇಲ್ಪಟ್ಟವರು ಶೀತದ ಬಾಧೆಯಿಂದ ಎಚ್ಚರ ವಹಿಸಬೇಕು ಎಂದು ವೈದ್ಯರು ಹೇಳುತ್ತಾರೆ.
# ಲಸಿಕೆ ಕಡ್ಡಾಯ:
2ನೇ ಡೋಸ್ ಲಿಸಿಕೆ ಕಡ್ಡಾಯವಾಗಿ ಹಾಕಿಸಿಕೊಳ್ಳುವ ಮೂಲಕ ಕೊರೊನಾವನ್ನು ಸಂಪೂರ್ಣವಾಗಿ ತಡೆಯಬಹುದಾಗಿದೆ. ಮೊದಲ ಡೋಸ್ ಹಾಕಿಸಿಕೊಂಡವರು 2ನೇ ಡೋಸ್ ಹಾಕಿಸಿಕೊಳ್ಳುವಲ್ಲಿ ಹಿಂಜರಿಕೆ ಮಾಡುತ್ತಿರುವುದು ಸರಿಯಲ್ಲ. ಲಸಿಕೆಯಿಂದ ಮಾತ್ರ ಕೊರೊನಾ ತಡೆಗಟ್ಟಲು ಸಾಧ್ಯ ಎಂದು ಸರಕಾರ ಹಾಗೂ ವೈದ್ಯರು ಹೇಳುತ್ತಿದ್ದಾರೆ.
# ಬೂಸ್ಟರ್ ಡೋಸ್:
60 ವರ್ಷ ಮೇಲ್ಪಟ್ಟವರಿಗೆ ಹಾಗೂ ಬಿಪಿ, ಶುಗರ್, ಹೃದಯ ಸಂಬಂ ಕಾಯಿಲೆ ಇರುವವರಿಗೆ ಹಾಗೂ ಮುಂಚೋಣಿ ಕಾರ್ಯಕರ್ತರು, ಪೊಲೀಸ್ ಸಿಬ್ಬಂದ್ದಿ ಮತ್ತು ಕೊರೊನಾ ವಾರಿಯರ್ಸ್‍ಗಳಿಗೆ ಬೂಸ್ಟರ್ ಡೋಸ್ ಅಗತ್ಯವಾಗಿರುತ್ತದೆ ಎಂದು ಸರಕಾರವೇ ಸೂಚನೆ ನೀಡಿದೆ.
# ನಿರ್ಲಕ್ಷತೆ ಸಲ್ಲ:
ಕೋವಿಡ್ 3ನೇ ಅಲೆಯಲ್ಲಿ ಹೆಚ್ಚಿನ ತೀವ್ರತೆಯಿಲ್ಲ ಎನ್ನುವುದಕ್ಕೆ ಯಾವುದೇ ರೀತಿಯ ಸಾವು ನೋವು ಸಂಭವಿಸಿಲ್ಲ ಹಾಗಂತ ನಿರ್ಲಕ್ಷತೆಯೂ ಸಲ್ಲ, ಕೊರೊನಾ ದೃಡಪಟ್ಟಲ್ಲಿ ಹೋಂಐಸಲೇಷನ್ ಮಾಡಿಕೊಳ್ಳುವುದು ಉತ್ತಮ. ಉಸಿರಾಟದ ತೊಂದರೆ, 99 ಡಿಗ್ರಿ ಜ್ವರ ವಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.
# ಮನೆ ಮದ್ದು:
ತುಳಸಿ ಎಲೆ-ಜೇನುತುಪ್ಪ, ವೀಳ್ಯದ ಎಲೆ ರಸ ಹಿಂಡಿ ಸೇವಿಸುವುದು ಒಳ್ಳೆಯದು ಹಾಗೂ ಅಮೃತ ಬಳ್ಳಿ ಕಷಾಯವೂ ಪರಿಣಾಮಕಾರಿ. ಇದರ ಜತೆಗೆ ಹಾಲಿಗೆ ಅರಿಶಿನ ಹಾಕಿ ಸೇವಿಸುವುದು ಹಾಗು ಬಿಸಿ ನೀರು ಉಪಯೋಗಿಸುವುದು , ಕಡ್ಡಾಯವಾಗಿ ಮಾಸ್ಕ್ ಮತ್ತು ಸಾಮಾಜಿ ಅಂತರ ಕಾಯ್ದುಕೊಳ್ಳುವುದು ಸೂಕ್ತ ಎಂದು ಆರ್ಯುವೇದದಲ್ಲಿ ಹೇಳಲಾಗುತ್ತದೆ.

Articles You Might Like

Share This Article