ಬೆಂಗಳೂರು, ಆ.12- ಕಬ್ಬನ್ ಪಾರ್ಕ್ಗೆ ತನ್ನ ದೂರದ ಸಂಬಂಧಿ ಯುವತಿಯನ್ನು ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ವೆಸಗಿ ಪರಾರಿಯಾಗಿರುವ ಆರೋಪಿಗಾಗಿ ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ತಮಿಳು ನಾಡು ಮೂಲದ ರಮೇಶ್ ಪರಾರಿಯಾಗಿರುವ ಆರೋಪಿ. ಈತ ತಮಿಳುನಾಡಿನಲ್ಲಿ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ಈ ಸಂಜೆಗೆ ತಿಳಿಸಿದ್ದಾರೆ. ಕಳೆದ ಆ.6ರಂದು ಆರೋಪಿ ರಮೇಶ ಬೆಂಗಳೂರಿಗೆ ಬಂದು ಸಂತ್ರಸ್ತ ಯುವತಿಗೆ ಕರೆ ಮಾಡಿ ತನ್ನನ್ನು ಕಬ್ಬನ್ ಪಾರ್ಕ್ನಲ್ಲಿ ಭೇಟಿ ಮಾಡಬೇಕೆಂದು ತಿಳಿಸಿದ.
ಆತನ ಮಾತನ್ನು ನಂಬಿ ಯುವತಿ ಕಬ್ಬನ್ ಪಾರ್ಕ್ಗೆ ಬಂದಳು. ಯುವತಿ ಜೊತೆ ಮಾತನಾಡುತ್ತಲೆ ಆಕೆಗೆ ನಂಬಿಕೆ ಬರುವಂತೆ ವರ್ತಿಸಿ ನಂತರ ಆಕೆಯನ್ನು ಹೊಟೇಲ್ ಒಂದಕ್ಕೆ ಕರೆದುಕೊಂಡು ಹೋಗಿ ಅ ತ್ಯಾಚಾರ ವೆಸಗಿ ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಘಾತಕ್ಕೊಳಗಾಗಿದ್ದ ಯುವತಿ ಮೂರು ದಿನಗಳ ನಂತರ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.