ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ಮಾಡಿದ್ದ ಆರೋಪಿ ಪೊಲೀಸರ ಎನ್‌ಕೌಂಟರ್‌ಗೆ ಬಲಿ

ಹರಿದ್ವಾರ, ಸೆ.16-ಚಿನ್ನಾಭರಣ ಮಳಿಗೆಯೊಂದರಲ್ಲಿ ದರೋಡೆ ನಡೆಸಿದ ಆರೋಪಿಯೊಬ್ಬ ಪೊಲೀಸರ ಎನ್‌ಕೌಂಟರ್‌ನಲ್ಲಿ ಹತನಾಗಿದ್ದು,ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.ಮೃತ ಆರೋಪಿಯನ್ನು ಪಂಜಾಬ್‌ನ ಮುಕ್ತಸರ ನಿವಾಸಿ ಸತೇಂದ್ರ ಪಾಲ್‌ ಅಲಿಯಾಸ್‌‍ ಲಕ್ಕಿ ಎಂದು ಗುರುತಿಸಲಾಗಿದ್ದು, ಆತನ ಪತ್ತೆಗೆ 1 ಲಕ್ಷ ರೂಪಾಯಿ ಬಹುಮಾನ ಘೋಷಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ಸೆ.1 ರಂದು ಹರಿದ್ವಾರದಲ್ಲಿ ದ್ವಿಚಕ್ರವಾಹನಗಳಲ್ಲಿ ಬಂದ ಐವರು ಆಭರಣ ಅಂಗಡಿಗೆ ನುಗ್ಗಿ ಅಲ್ಲಿನ ಕೆಲಸಗಾರರಿಗೆ ಬಂದೂಕು ತೋರಿಸಿ 5 ಕೋಟಿ ಮೌಲ್ಯದ ಚಿನ್ನ ಹಾಗು ಇತರೆ ವಸ್ತುಗಳನ್ನು ದರೋಡೆ ಮಾರಿ ಪರಾರಿಯಾಗಿದ್ದರು. … Continue reading ಚಿನ್ನಾಭರಣ ಮಳಿಗೆಯಲ್ಲಿ ದರೋಡೆ ಮಾಡಿದ್ದ ಆರೋಪಿ ಪೊಲೀಸರ ಎನ್‌ಕೌಂಟರ್‌ಗೆ ಬಲಿ