ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ವಾಚ್‍ಗಳ ವಶ

ಬಾಗೇಪಲ್ಲಿ,ಮಾ.21- ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಕಟ್ಟುನಿಟ್ಟಿನ ನೀತಿಸಂಹಿತೆ ಜಾರಿಯಲ್ಲಿದ್ದರೂ ಮತದಾರರಿಗೆ ಆಮಿಷವೊಡ್ಡಲು ಉಡುಗೊರೆಗಳ ಸಾಗಾಣಿಕೆ ಮಾತ್ರ ನಿಂತಿಲ್ಲ.ಬಾಗೇಪಲ್ಲಿಯ ಆಂಧ್ರ ಗಡಿಯ ಚೆಕ್ ಪೋಸ್ಟ್ ನಲ್ಲಿ ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್‍ಮೋಹನ್‍ರೆಡ್ಡಿಯ ಭಾವಚಿತ್ರವುಳ್ಳ 1 ಲಕ್ಷ ರೂ. ಮೌಲ್ಯದ ವಾಚ್‍ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅನಂತಪುರದಿಂದ ಬೆಂಗಳೂರಿಗೆ ಫಾಚ್ರ್ಯೂನ್ ಕಾರಿನಲ್ಲಿ 96 ವಾಚ್‍ಗಳನ್ನು ಯಾವುದೇ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದಾಗ ಚುನಾವಣಾಧಿಕಾರಿಗಳು ಹಾಗೂ ಪೊಲೀಸ್ ಸಿಬ್ಬಂದಿಗಳು ಪರಿಶೀಲಿಸಿದಾಗ ವಾಚ್‍ಗಳು ಪತ್ತೆಯಾಗಿವೆ. ಕಾರಿನಲ್ಲಿದ್ದ ಆಂಧ್ರಪ್ರದೇಶದ ಅನಂತಪುರ ಮೂಲದ ಬಂಡಿ ನಾಗೇಂದ್ರ ಮತ್ತು ಗನ್‍ಮ್ಯಾನ್ ಬಿ.ನಾಗೇಂದ್ರ ಮೇಲೆ … Continue reading ಮತದಾರರಿಗೆ ಹಂಚಲು ಸಾಗಿಸುತ್ತಿದ್ದ ವಾಚ್‍ಗಳ ವಶ