ಕ್ಷುಲ್ಲಕ ವಿಚಾರಕ್ಕೆ ಘರ್ಷಣೆ : ಚುನಾವಣೆ ಕರ್ತವ್ಯದಲ್ಲಿದ್ದ ಭದ್ರತಾ ಸಿಬ್ಬಂದಿ ಸಾವು

Social Share

ಪೆÇರಬಂದರು,ನ.27-ಕ್ಷಲ್ಲಕ ವಿಚಾರಕ್ಕೆ ಐಆರ್‌ಬಿ ಕಾನ್‍ಸ್ಟೆಬಲ್ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ ಪರಿಣಾಮ ಇಬ್ಬರು ಸಾವನ್ನಪ್ಪಿ ಮತ್ತಿಬ್ಬರು ಗಾಯಗೊಂಡಿರುವ ಘಟನೆ ನಡೆದಿದೆ. ಪೊರಬಂದಿರಿನಿಂದ 25 ಕಿ.ಮೀ ದೂರದಲ್ಲಿರುವ ತುಕಡಾಗೋಸ ಗ್ರಾಮದ ಸೈಕ್ಲೋನ್ ಸೆಂಟರ್‍ನಲ್ಲಿ ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಯೋಧರು ತಂಗಿದ್ದರು.

ನಿನ್ನೆ ಸಂಜೆ ಕ್ಷುಲ್ಲಕ ವಿಚಾರಕ್ಕೆ ಸಿಆರ್‍ಪಿಎಫ್ ಯೋಧನೊಬ್ಬ ತನ್ನ ಸಹೋದ್ಯೋಗಿಗಳ ಮೇಲೆ ರೈಫಲ್‍ನಿಂದ ಗುಂಡು ಹಾರಿಸಿದ್ದಾನೆ. ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದರೆ ಮತ್ತಿಬ್ಬರು ಗಾಯಗೊಂಡಿದ್ದಾರೆ.

ಅವರಲ್ಲಿ ಗಾಯಗೊಂಡವರಲ್ಲಿ ಒಬ್ಬನ ಹೊಟ್ಟೆಗೆ ಹಾಗೂ ಒಬ್ಬನ ಕಾಲಿಗೆ ಗುಂಡು ತಗುಲಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಆರೋಪಿಯು ಮಣಿಪುರ ಎಸ್‍ಎಪಿ ಭಾರತೀಯ ರಿಸರ್ವ್ ಬೆಟಾಲಿಯನ್‍ಗೆ ರೈಫಲ್‍ಮ್ಯಾನ್ ಕಾನ್‍ಸ್ಟೆಬಲ್ ಆಗಿದ್ದು ತನ್ನ ಎಕೆ47 ರೈಫಲ್‍ನಿಂದ ಗುಂಡು ಹಾರಿಸಿದ್ದಾನೆ ಎಂದು ಪ್ರಾಥಮಿಕ ಮಾಹಿತಿಯಿಂದ ತಿಳಿದುಬಂದಿದೆ.

ಡಿ.ಕೆ.ಶಿವಕುಮಾರ್-ಸಿದ್ದರಾಮಯ್ಯ ರಹಸ್ಯ ಸಮಾಲೋಚನೆ

ಗಾಯಗೊಂಡ ಕಾನ್‍ಸ್ಟೆಬಲ್‍ಗಳಲ್ಲಿ ಒಬ್ಬರು ಮೂರನೇ ಐಆರ್‍ಬಿ ಮತ್ತೊಬ್ಬರು 4ನೇ ಐಆರ್‍ಬಿ ತುಕಡಿಗೆ ಸೇರಿದವರಾಗಿದ್ದು ಹೆಚ್ಚಿನ ತನಿಖೆ ನಡೆಯುತ್ತಿದೆ. ಡಿ.1ರಂದು ನಡೆಯಲಿರುವ ಗುಜರಾತ್ ವಿಧಾನಸಭೆ ಚುನಾವಣೆಗೆ ಭದ್ರತೆಗಾಗಿ ಈ ಪಡೆಯನ್ನು ನಿಯೋಜಿಸಲಾಗಿತ್ತು.

ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ಮತ್ತೊಂದು ಕರ್ಮಕಾಂಡ , ಭ್ರಷ್ಟಾಚಾರದ ವಿಡಿಯೋ ವೈರಲ್

IRB, jawans, killed, firing, colleague, Gujarat,

Articles You Might Like

Share This Article