Sunday, September 8, 2024
Homeಬೆಂಗಳೂರುಮಾದಕ ಮುಕ್ತ ಬೆಂಗಳೂರು ನಗರ ನಿರ್ಮಾಣಕ್ಕೆ ಕೈಜೋಡಿಸಿ : ಬಿ.ದಯಾನಂದ

ಮಾದಕ ಮುಕ್ತ ಬೆಂಗಳೂರು ನಗರ ನಿರ್ಮಾಣಕ್ಕೆ ಕೈಜೋಡಿಸಿ : ಬಿ.ದಯಾನಂದ

ಬೆಂಗಳೂರು, ಜೂ.26- ಸಾಕ್ಷ್ಯ ಸ್ಪಷ್ಟ – ನಿಯಂತ್ರಣ ಅವಶ್ಯ ಎಂಬ ವಿಶ್ವ ಸಂಸ್ಥೆಯ ಧ್ಯೇಯ ವಾಕ್ಯದಲ್ಲಿ ಈ ವರ್ಷದ ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧದ ಅಂತಾರಾಷ್ಟ್ರಿಯ ದಿನವನ್ನು ಆಚರಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಬಿ. ದಯಾನಂದ ತಿಳಿಸಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರತಿವರ್ಷದಂತೆ ಈ ಬಾರಿಯೂ ಜೂನ್ 26 ರನ್ನು ಮಾದಕ ವ್ಯಸನ ಮತ್ತು ಕಳ್ಳಸಾಗಣೆ ವಿರೋಧದ ಅಂತಾರಾಷ್ಟ್ರಿಯ ದಿನವನ್ನು ಆಚರಿಸುತ್ತಾರೆ.

ವಿಶ್ವ ಸಂಸ್ಥೆಯ ಮಾರ್ಗಸೂಚಿಯ ಪ್ರಕಾರ ಈ ವರ್ಷ ಸಾಕ್ಷ್ಯ ಸ್ಪಷ್ಟ – ನಿಯಂತ್ರಣ ಅವಶ್ಯ ಎಂಬ ಧ್ಯೇಯ ವಾಕ್ಯದಲ್ಲಿ ಕರ್ನಾಟಕ ಪೊಲೀಸ್, ಬೆಂಗಳೂರು ಪೊಲೀಸ್, ಸಂಘ – ಸಂಸ್ಥೆಗಳು ಹಾಗೂ ಶೈಕ್ಷಣಿಕ ಸಂಸ್ಥೆಗಳು ಕೈ ಜೋಡಿಸಿವೆ.

ಮಾದಕ ವಸ್ತುಗಳ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಲಾಗಿದೆ. ಕರ್ನಾಟಕವನ್ನು ಮಾದಕ ಮುಕ್ತ ಮಾಡುವುದಾಗಿ ಗೃಹಸಚಿವರು ಬಹಿರಂಗವಾಗಿ ಹೇಳಿದ್ದಾರೆ. ಆದೇ ರೀತಿ ಅವರ ಸೂಚನೆಯಂತೆ ನಾವು ಕಾರ್ಯ ನಿರ್ವಹಿಸುತ್ತೇವೆ ಎಂದು ಆಯುಕ್ತರು ತಿಳಿಸಿದ್ದಾರೆ.

RELATED ARTICLES

Latest News