ಕಾರ್ಕಳ ಅತ್ಯಾಚಾರ ಪ್ರಕರಣ : ಸರ್ಕಾರದ ವಿರುದ್ಧ ಸುನೀಲ್‌ ಕುಮಾರ್‌ ಆಕ್ರೋಶ

ಬೆಂಗಳೂರು,ಆ.24- ಅನ್ಯಕೋಮಿನ ಯುವಕ ಹಿಂದೂ ಯುವತಿಯನ್ನು ಅಪಹರಿಸಿ ಮಧ್ಯದಲ್ಲಿ ಮತ್ತುಭರಿಸಿ ಅತ್ಯಾಚಾರ ನಡೆಸಿರುವುದು ಪೈಶಾಚಿಕ ಕೃತ್ಯ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಬದುಕಿದೆಯೇ ಎಂದು ಬಿಜೆಪಿ ಶಾಸಕ ಎಸ್‌‍.ಸುನೀಲ್‌ಕುಮಾರ್‌ ಪ್ರಶ್ನಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಮಲು ಬರುವ ಪದಾರ್ಥಗಳನ್ನು ನೀಡಿ ಅತ್ಯಾಚಾರ ಮಾಡುತ್ತಾರೆಂದರೆ ಇದು ಆತಂಕದ ವಿಷಯ. ಹುಬ್ಬಳ್ಳಿ ಘಟನೆ ಮರೆಯುವ ಮುನ್ನ ಮತ್ತೊಂದು ಘಟನೆ ಮರುಕಳಿಸಿದ್ದು, ರಾಜ್ಯದಲ್ಲಿ ಪೊಲೀಸರ ಬಗ್ಗೆ ಭಯ ಇಲ್ಲ. ಹೇಳುವವರು ಕೇಳುವರಿಲ್ಲ ಎಂದು ವಾಗ್ದಾಳಿ ನಡೆಸಿದರು. ಕಾರ್ಕಳದಲ್ಲಿ ಯುವತಿಯ ಅಪಹರಣ ಹಾಗೂ ಅತ್ಯಾಚಾರ … Continue reading ಕಾರ್ಕಳ ಅತ್ಯಾಚಾರ ಪ್ರಕರಣ : ಸರ್ಕಾರದ ವಿರುದ್ಧ ಸುನೀಲ್‌ ಕುಮಾರ್‌ ಆಕ್ರೋಶ