ಬೆಂಗಳೂರು,ಸೆ.30- ಕಾಂಗ್ರೆಸ್ ಯುವಕ ನಾಯಕ ರಾಹುಲ್ ಗಾಂಧಿ ನಡೆಸುತ್ತಿರುವುದು ಭಾರತ್ ಜೋಡೋ ಯಾತ್ರೆಯಲ್ಲ. ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು ಎಂದು ರಾಜ್ಯ ಬಿಜೆಪಿ ಘಟಕ ವ್ಯಂಗ್ಯವಾಡಿದೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ ಮಾನ್ಯ ರಾಹುಲ್ ಗಾಂಯವರೇ ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದೆ.
ಎನ್ಸಿಆರ್ಬಿ ವರದಿ ಪ್ರಕಾರ ಅಪರಾಧ ಸೂಚ್ಯಂಕ ತಮಿಳುನಾಡು 422-1, ಕೇರಳ 401ಕ್ಕೆ 4, ರಾಜಸ್ಥಾನ 269ಕ್ಕೆ 6, ಕರ್ನಾಟಕ 172ಕ್ಕೆ 8 ಎಂದು ಅಂಕಿಅಂಶಗಳ ಸಮೇತ ತಿರುಗೇಟು ಕೊಟ್ಟಿದೆ.
ರಾಹುಲ್ ಗಾಂಧಿಯವರೇ ದಲಿತರಿಗೆ ಸುರಕ್ಷಿತವಾಗಿರುವ ಕರ್ನಾಟಕಕ್ಕೆ ಸ್ವಾಗತ ಎಂದು ಮತ್ತೊಂದು ಟ್ವೀಟ್ ಮಾಡಿರುವ ಬಿಜೆಪಿ, ಕಾಂಗ್ರೆಸ್ ಆಡಳಿತವಿರುವ ರಾಜಸ್ಥಾನದಲ್ಲಿ ದಲಿತರಿಗೆ ರಕ್ಷಣೆ ನೀಡಿ. ರಾಜಸ್ಥಾನದಲ್ಲಿ 476 ಅತ್ಯಾಚಾರ ಮತ್ತು ಅಪರಾಧ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 124 ಪ್ರಕರಣಗಳು ಇವೆ ಎಂದು ಹೇಳಿದೆ.
ಪರಿಶಿಷ್ಟ ಪಂಗಡದ ಸಮುದಾಯ ಸುರಕ್ಷಿತವಾಗಿರುವ ಕರುನಾಡಿಗೆ ಆಗಮಿಸುತ್ತಿರುವ ನಿಮಗೆ ಸ್ವಾಗತ. ರಾಜಸ್ಥಾನದಲ್ಲಿ ಈ ಸಮುದಾಯದ ಮೇಲೆ 119 ಪ್ರಕರಣಗಳು ದಾಖಲಾಗಿದ್ದರೆ ಕರ್ನಾಟಕದಲ್ಲಿ 29 ಇದೆ ಎಂದು ಅಂಕಿಅಂಶಗಳ ದಾಖಲೆಯ ವಿವರ ಮೂಲಕ ರಾಹುಲ್ ಗಾಂಧಿಗೆ ಠಕ್ಕರ್ ಕೊಟ್ಟಿದೆ.
ಇಂದು ರಾಜ್ಯದಲ್ಲಿ ರಾಹುಕಾಲ ಆರಂಭದ ಸಮಯ ಬೆಳಿಗ್ಗೆ 10.30. ಆದುದರಿಂದ ದಿನನಿತ್ಯದ ನೆಮ್ಮದಿ ಮತ್ತು ಶಾಂತಿಗಾಗಿ ರಾಹು ಸಂಬಂಧಿತವಾದ ಕಾರ್ಯಕ್ರಮಗಳಿಂದ ಅಂತರ ಕಾಯ್ದುಕೊಳ್ಳುವಂತೆ ಜನಹಿತಕ್ಕಾಗಿ ಜಾರಿ.#Rahukaala#SonsOfTipu#BharatTodoYatra#GoBackRahul pic.twitter.com/V34xXY4d3u
— BJP Karnataka (@BJP4Karnataka) September 30, 2022
ಜಾಮೀನಿನ ಆಧಾರದಲ್ಲಿ ಜೈಲಿನಿಂದ ಹೊರಗಿದ್ದುಕೊಂಡು ಭಾರತ್ ಜೋಡೋ ಯಾತ್ರೆ ಮಾಡುತ್ತಿರುವ ಭ್ರಷ್ಟ ಪರಿವಾರದ ನಕಲಿ ಗಾಂಧಿ ಕುಡಿ @RahulGandhi ಅವರಿಗೆ ಕರ್ನಾಟಕಕ್ಕೆ ಆತ್ಮೀಯ ಸ್ವಾಗತ.#Rahukaala#BharatTodoYatra pic.twitter.com/l3v9B5jVY4
— BJP Karnataka (@BJP4Karnataka) September 30, 2022
ಭಯೋತ್ಪಾದಕರ ಬಗ್ಗೆ ಮೃದು ಧೊರಣೆ ಹೊಂದಿ, ದೇಶ ವಿಭಜಕರ ಜೊತೆ ಸಂಬಂಧ ಹೊಂದಿರುವ ರಾಹುಲ್ ಗಾಂಧಿ ಅವರಿಗೆ ಸ್ವಾಗತ.#Rahukaala#BharatTodoYatra pic.twitter.com/BE0hKdxQYn
— BJP Karnataka (@BJP4Karnataka) September 30, 2022
ರಾಹುಲ್ ಗಾಂಧಿ ಮಾಡುತ್ತಿರುವುದು ಭಾರತ ಜೋಡೋ ಯಾತ್ರೆಯಲ್ಲ,
ಎಐಸಿಸಿ ಮುಂದಿನ ಅಧ್ಯಕ್ಷ ಸ್ಥಾನವನ್ನು ನಕಲಿ ಗಾಂಧಿಗಳ ಕುಟುಂಬದಲ್ಲೇ ಇರಿಸಿಕೊಳ್ಳಲು ಮತ್ತು ನಿಯಂತ್ರಿಸಲು ನಡೆಸುತ್ತಿರುವ ಕಸರತ್ತು.#Rahukaala#BharatTodoYatra pic.twitter.com/K1ykQb317Y
— BJP Karnataka (@BJP4Karnataka) September 30, 2022
ಅಪರಾಧ ಸೂಚ್ಯಂಕ: (NCRB Report)
√ ತಮಿಳುನಾಡು – 422.1
√ ಕೇರಳ – 401.4
√ ರಾಜಸ್ಥಾನ – 269.6
√ ಕರ್ನಾಟಕ – 172.8ಮಾನ್ಯ @RahulGandhi ಅವರೇ, ಅಪರಾಧ ಪ್ರಮಾಣ ಕಡಿಮೆ ಇರುವ ಕರ್ನಾಟಕಕ್ಕೆ ಸ್ವಾಗತ. ನಿಮ್ಮ ಶಾಂತಿಯ ಮಂತ್ರ ಕರುನಾಡಿಗೆ ಅಗತ್ಯವಿಲ್ಲ.#Rahukaala#BharatTodoYatra
— BJP Karnataka (@BJP4Karnataka) September 30, 2022
Cases Registered(CR) under Rape for Crime against Scheduled Castes during 2020 (MHA Report)
ರಾಜಸ್ಥಾನ – 476
ಕರ್ನಾಟಕ – 124ಮಾನ್ಯ @RahulGandhi ಅವರೇ, ದಲಿತರಿಗೆ ಸುರಕ್ಷಿತವಾಗಿರುವ ಕರ್ನಾಟಕಕ್ಕೆ ಸ್ವಾಗತ. ಕಾಂಗ್ರೆಸ್ ಆಡಳಿತದ ರಾಜಸ್ತಾನದಲ್ಲಿ ದಲಿತರಿಗೆ ರಕ್ಷಣೆ ನೀಡಿ.#Rahukaala#BharatTodoYatra
— BJP Karnataka (@BJP4Karnataka) September 30, 2022
Cases Registered(CR) under Rape for Crime against Scheduled Tribes during 2020 (MHA Report)
ರಾಜಸ್ಥಾನ – 119
ಕರ್ನಾಟಕ – 29ಮಾನ್ಯ @RahulGandhi ಅವರೇ, ಪರಿಶಿಷ್ಟ ಪಂಗಡ ಸಮುದಾಯದವರು ಸುರಕ್ಷಿತವಾಗಿರುವ ಕರುನಾಡಿಗೆ ಸ್ವಾಗತ. #Rahukaala#BharatTodoYatra
— BJP Karnataka (@BJP4Karnataka) September 30, 2022