ಅಸ್ಸಾಂಗೆ ರಾಜ್ಯಪಾಲರಾಗಿ ಲಕ್ಷ್ಮಣ್ ಪ್ರಸಾದ್ ಆಚಾರ್ಯ ನೇಮಕ, ಸಿಎಂ ಹಿಮಂತ ಬಿಸ್ವಾ ಸ್ವಾಗತ

ಗುವಾಹಟಿ, ಜು.28- ಅಸ್ಸಾಂಗೆ ಲಕ್ಷ್ಮಣ್ ಪ್ರಸಾದ್ ಆಚಾರ್ಯ ಅವರನ್ನು ಹೊಸ ರಾಜ್ಯಪಾಲರನ್ನಾಗಿ ನೇಮಕ ಮಾಡಿರುವುದನ್ನು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಸ್ವಾಗತಿಸಿದ್ದಾರೆ. ನೂತನ ರಾಜ್ಯಪಾಲರ ಸಾಂಸ್ಥಿಕ ಮತ್ತು ಶಾಸಕಾಂಗ ಅನುಭವಗಳಿಂದ ರಾಜ್ಯಕ್ಕೆ ಪ್ರಯೋಜನವಾಗಲಿದೆ. ನಿರ್ಗಮಿತ ರಾಜ್ಯಪಾಲ ಗುಲಾಬ್ ಚಂದ್ ಕಟಾರಿಯಾ ಅಧಿಕಾರಾವಧಿಯಲ್ಲಿ ನೀಡಿದ ಕೊಡುಗೆಗಳಿಗಾಗಿಯೂ ಧನ್ಯವಾದ ತಿಳಿಸಿದ್ದಾರೆ. ಛತ್ತೀಸ್ಗಢದ ರಾಜ್ಯಪಾಲರ ಹುದ್ದೆಗೆ ಅಸ್ಸಾಂನ ಮಾಜಿ ಸಂಸದ ರಾಮೆನ್ ದೇಕಾ ಅವರನ್ನು ಹೆಸರಿಸಿದ್ದಕ್ಕಾಗಿ ಬಿಸ್ವಾ ಅಭಿನಂದಿಸಿದ್ದಾರೆ. ಆಚಾರ್ಯ ಅವರನ್ನು ಮಣಿಪುರದ ಹೆಚ್ಚುವರಿ ಉಸ್ತುವಾರಿಯೊಂದಿಗೆ ಅಸ್ಸಾಂನ ರಾಜ್ಯಪಾಲರನ್ನಾಗಿ ಮಾಡಲಾಗಿದೆ. … Continue reading ಅಸ್ಸಾಂಗೆ ರಾಜ್ಯಪಾಲರಾಗಿ ಲಕ್ಷ್ಮಣ್ ಪ್ರಸಾದ್ ಆಚಾರ್ಯ ನೇಮಕ, ಸಿಎಂ ಹಿಮಂತ ಬಿಸ್ವಾ ಸ್ವಾಗತ