ಎಡಪಕ್ಷ ಅಧಿಕಾರಕ್ಕೆ ಬಂದರೆ ಹಳೆ ಪಿಂಚಣಿ ಯೋಜನೆ ಮರುಜಾರಿ : ಪ್ರಕಾಶ್ ಕಾರಟ್

Social Share

ಅಗರ್ತಲಾ,ಫೆ.13- ತ್ರಿಪುರಾದಲ್ಲಿ ಅಧಿಕಾರಕ್ಕೆ ಬಂದರೆ ಎಡ-ಕಾಂಗ್ರೆಸ್ ಮೈತ್ರಿಕೂಟ ತೆಗೆದುಕೊಳ್ಳುವ ಮೊದಲ ನಿರ್ಧಾರ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವುದು ಎಂದು ಹಿರಿಯ ಸಿಪಿಐ(ಎಂ) ನಾಯಕ ಪ್ರಕಾಶ್ ಕಾರಟ್ ಹೇಳಿದ್ದಾರೆ.

ಪಶ್ಚಿಮ ತ್ರಿಪುರಾ ಜಿಲ್ಲೆಯ ಖಯೇರ್‍ಪುರದಲ್ಲಿ ಚುನಾವಣಾಪೂರ್ವ ರ್ಯಾಲಿಯನ್ನ್ನುದ್ದೇಶಿಸಿ ಮಾತನಾಡಿದ ಅವರು, ತ್ರಿಪುರಾದಲ್ಲಿ ಎಡಪಕ್ಷ ಸರ್ಕಾರ ಅಕಾರದಲ್ಲಿರುವವರೆಗೂ ಹೊಸ ಪಿಂಚಣಿ ಯೋಜನೆಯನ್ನು ಜಾರಿಗೊಳಿಸಲಾಗಿರಲಿಲ್ಲ ಎಂದರು.

2018ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದಲ್ಲಿ ಹೊಸ ಪಿಂಚಣಿ ಯೋಜನೆ ಜಾರಿಗೆ ತಂದಿದೆ ಎಂದರು.ಅಧಿಕಾರಕ್ಕೆ ಬಂದ ನಂತರ ಎಡ-ಕಾಂಗ್ರೆಸ್ ತೆಗೆದುಕೊಳ್ಳುವ ಮೊದಲ ನಿರ್ಧಾರ ಹಳೆಯ ಪಿಂಚಣಿ ಯೋಜನೆಯನ್ನು ಮರಳಿ ಜಾರಿಗೆ ತರಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಚುನಾವಣೆಯಲ್ಲಿ ಗೆದ್ದು, ತಾನು ಭರವಸೆ ನೀಡಿದಂತೆ ನೌಕರರಿಗೆ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸಿದೆ, ತ್ರಿಪುರಾದಲ್ಲಿ ಎಡ-ಕಾಂಗ್ರೆಸ್ ಮುಂದಿನ ಸರ್ಕಾರ ರಚಿಸಿದರೆ ಅದೇ ಕೆಲಸ ಮಾಡಲಾಗುವುದು ಎಂದರು.

ತ್ರಿಪುರಾದಲ್ಲಿ 1.88 ಲಕ್ಷ ರಾಜ್ಯ ಸರ್ಕಾರಿ ನೌಕರರ ಮತಗಳನ್ನು ಗೆಲ್ಲುವ ಪ್ರಯತ್ನದಲ್ಲಿ ಎಡರಂಗ ಮತ್ತು ಕಾಂಗ್ರೆಸ್ ಹಳೆಯ ಪಿಂಚಣಿ ಯೋಜನೆಯನ್ನು ಮರು ಪರಿಚಯಿಸುವ ಭರವಸೆ ನೀಡಿವೆ.ಬಿಜೆಪಿಯವರು ಹಣ ವ್ಯಯಿಸುತ್ತಿರುವ ವಿಧಾನದ ಬಗ್ಗೆ ಜನರು ಎಚ್ಚರದಿಂದಿರಬೇಕು.ರಾಜ್ಯದಲ್ಲಿ ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುವ ತಂತ್ರವನ್ನು ವಿಫಲಗೊಳಿಸಬೇಕು ಎಂದರು.

ಮಂಡ್ಯದತ್ತ ಮೂರು ಪಕ್ಷಗಳ ಚಿತ್ತ, ಬಿಜೆಪಿಯತ್ತ ಸುಮಲತಾ ಒಲವು ..?

ತ್ರಿಪುರಾದಂತಹ ಸಣ್ಣ ರಾಜ್ಯದಲ್ಲಿ ವಿರೋಧ ಪಕ್ಷಗಳ ಮೈತ್ರಿಕೂಟದ ಗೆಲುವು ರಾಷ್ಟ್ರೀಯ ಪರಿಣಾಮಗಳನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಅವರು, ಈಗ ಅಪಾಯದಲ್ಲಿರುವ ಪ್ರಜಾಪ್ರಭುತ್ವ ಮತ್ತು ಜಾತ್ಯತೀತತೆಯನ್ನು ರಕ್ಷಿಸಲು ಇದು ಖಂಡಿತವಾಗಿಯೂ ದೇಶಾದ್ಯಂತ ಚಳುವಳಿಯನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮುಕುಲ್ ವಾಸ್ನಿಕ್ ಮತ್ತು ಖಯೇರ್‍ಪುರ ವಿಧಾನಸಭೆಯಿಂದ ಸ್ರ್ಪಸುತ್ತಿರುವ ಸಿಪಿಎಂ ನಾಯಕ ಪಬಿತ್ರಾ ಕರ್ ಕೂಡ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದರು.

#OldPensionSystem, TripuraAssemblypolls, #LeftCongress, #oldpensionscheme, #PrakashKarat,

Articles You Might Like

Share This Article