ಮುಜಾಫರ್ನಗರ (ಯುಪಿ), ಫೆ.2- ಮದುವೆ ಆರತಕ್ಷತೆ ವೇಳೆ ನೃತ ಮಾಡುತ್ದಿವರ ನಡುವೆ ನಡೆದ ಮಾತಿನ ಚಕಮಕಿ ಗಲಾಟೆ ವೇಳೆ ವ್ಯಕ್ತಿಯೊಬ್ಬನಿಗೆ ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಅಂತವಾಡ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ವಧುವಿನ ಸಂಬಂಧಿ ಸತೀಶ್ (32) ಎಂದು ಗುರುತಿಸಲಾಗಿದೆ. ಇಬ್ಬರನ್ನು ಬಂಧಿಸಲಾಗಿದೆ ಎಂದು ಖತೌಲಿ ಠಾಣೆ ಪೊಲೀಸರು ತಿಳಿಸಿದ್ದಾರೆ.
ಮದುವೆಗೆ ಆಗಮಿಸಿದ್ದ ಮದುಮಗನ ಸ್ನೇಹಿತರು ಡಿಜೆ ಸಂಗೀತಕ್ಕೆ ನೃತ್ಯ ಮಾಡುತ್ತಿದ್ದಾಗ ಅಡ್ಡ ಬರುತ್ತಿದ್ದಾರೆ ಎಂದು ಜಗಳವಾಗಿದೆ ಇದು ನಂತರ ವಿಕೋಪಕ್ಕೆ ತಿರುಗಿ ಘರ್ಷಣೆ ನಡೆದಿದೆ.
ಉಕ್ರೇನ್ ಜನವಸತಿ ಕಟ್ಟಡದ ಮೇಲೆ ರಷ್ಯಾ ರಾಕೆಟ್ ದಾಳಿ, ಮೂವರ ಸಾವು
ಗುಂಪಿನಲ್ಲಿದ್ದ ಬಬ್ಬ ತನ್ನ ಬಳಿ ಇದ್ದ ನಾಡ ಪಿಸ್ತೂಲಿನಿಂದ ಗುಂಡು ಹಾರಿಸಿದ್ದಾನೆ ಇದು ಜಗಳ ಬಿಡಿಸಲು ಬಂದು ವಧುವಿನ ಕಡೆಯ ವ್ಯಕ್ತಿಗೆ ತಾಗಿದ್ದು ಆತ ಸ್ಥಳದಲ್ಲೇ ಸಾವನ್ನಪ್ಪಿದ ಎನ್ನಲಾಗಿದೆ. ಮದುವೆ ಮನೆಗೆ ಬಂದವರು ಕಣ್ಣೀರು ಹಾಕಿದ್ದಾರೆ
Man shot, dead, following, altercation, wedding,