ಬೇವಿನ ಮರದಲ್ಲಿ ಜಿನುಗಿದ ಹಾಲು, ಪೂಜೆ ಮಾಡಲು ಮುಗಿಬಿದ್ದ ಜನ

ಗೌರಿಬಿದನೂರು, ಜೂ.26- ನಗರದ ಬೈಪಾಸ್‌ ರಸ್ತೆಯ ವಿನಾಯಕ ವೃತ್ತದ ಬಳಿ ರಸ್ತೆಯ ಬದಿಯಲ್ಲಿನ ಬೇವಿನ ಮರವೊಂದರಲ್ಲಿ ಹಾಲು ಬರುತ್ತಿದ್ದು, ಈ ವಿಸ್ಮಯ ನೋಡಲು ಜನರು ತಂಡೋಪತಂಡವಾಗಿ ಆಗಮಿಸುತ್ತಿದ್ದು, ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ. ವಿನಾಯಕ ವೃತ್ತದ ಡಿ.ಪಾಳ್ಯ ರಸ್ತೆಯ ಬದಿಯಲ್ಲಿನ ಬೇವಿನ ಮರದ ರೆಂಬೆಯಿಂದ ಬೆಳಗಿನ ಜಾವದಿಂದ ಒಂದೇ ಸಮನೆ ಮರದಲ್ಲಿ ಹಾಲು ಜಿನುಗುತ್ತಿದ್ದು, ಈ ಸುದ್ದಿ ನಗರದೆಲ್ಲೆಡೆ ಹಬ್ಬಿ ಬೇವಿನ ಮರದಲ್ಲಿ ಹಾಲು ಬರುವುದನ್ನು ವೀಕ್ಷಿಸಲು ಮುಗಿಬಿದ್ದರು. ಸಂಕಷ್ಟಹರ ಚತುರ್ಥಿ ದಿನದಂದೇ ಈ ಘಟನೆ ನಡೆಯುತ್ತಿರುವುದು ವಿಶೇಷ … Continue reading ಬೇವಿನ ಮರದಲ್ಲಿ ಜಿನುಗಿದ ಹಾಲು, ಪೂಜೆ ಮಾಡಲು ಮುಗಿಬಿದ್ದ ಜನ