ಗಾರ್ಮೆಂಟ್ಸ್ ಬಸ್‌‍ ಹರಿದು ತಾಯಿ-ಮಗಳು ಸ್ಥಳದಲ್ಲೇ ಸಾವು

ತುಮಕೂರು,ಸೆ.10– ರಸ್ತೆಯಲ್ಲಿ ನಡೆದುಹೋಗುತ್ತಿದ್ದ ತಾಯಿ-ಮಗಳ ಮೇಲೆ ಗಾರ್ಮೆಂಟ್ಸ್ ಬಸ್‌‍ ಹರಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಿಪಟೂರು ತಾಲೂಕಿನ ಹುಚ್ಚನಹಟ್ಟಿ ರಾಮಶೆಟ್ಟಿಹಳ್ಳಿ ಬಳಿಯ ಬೈಪಾಸ್‌‍ ರಸ್ತೆಯಲ್ಲಿ ನಡೆದಿದೆ.ರಾಮಶೆಟ್ಟಿಹಳ್ಳಿ ಗ್ರಾಮದ ಕಮಲಮ(45), ವೀಣಾ(16) ಮೃತಪಟ್ಟ ತಾಯಿ-ಮಗಳು ಎನ್ನಲಾಗಿದೆ. 10ನೇ ತರಗತಿ ಓದುತ್ತಿದ್ದ ಮಗಳನ್ನು ಶಾಲೆಗೆ ಬಿಡಲು ಕಮಲಮ ಗ್ರಾಮದ ರಾಷ್ಟ್ರೀಯ ಹೆದ್ದಾರಿ 206 ರಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಗಾರ್ಮೆಂಟ್ಸ್ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಇಬ್ಬರೂ ಸ್ಥಳದಲ್ಲಿಯೇ ಮೃತಪಟ್ಟರೆ, ಮತ್ತೊಬ್ಬ ಪಾದಚಾರಿ ಮುದ್ದಯ್ಯ ಎಂಬುವವರಿಗೆ … Continue reading ಗಾರ್ಮೆಂಟ್ಸ್ ಬಸ್‌‍ ಹರಿದು ತಾಯಿ-ಮಗಳು ಸ್ಥಳದಲ್ಲೇ ಸಾವು