Wednesday, May 31, 2023
Homeಇದೀಗ ಬಂದ ಸುದ್ದಿ5 ವರ್ಷದ ಪರಿಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ : ಸಚಿವ ಚಲುವರಾಯಸ್ವಾಮಿ

5 ವರ್ಷದ ಪರಿಶ್ರಮಕ್ಕೆ ಈಗ ಪ್ರತಿಫಲ ಸಿಕ್ಕಿದೆ : ಸಚಿವ ಚಲುವರಾಯಸ್ವಾಮಿ

- Advertisement -

ಬೆಂಗಳೂರು,ಮೇ 27- ಕಳೆದ ಐದು ವರ್ಷದಿಂದ ನಾವು ಪಟ್ಟಿರುವ ಕಷ್ಟಕ್ಕೆ ಈಗ ಪ್ರತಿಫಲ ಸಿಕ್ಕಿದೆ ಎಂದು ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಸ್ಥಾನ ಏನು ಸುಲಭವಾಗಿ ಸಿಕ್ಕಿಲ್ಲ.

ಕಾಂಗ್ರೆಸ್ ಸೇರಿದ ಬಳಿಕ ಇತ್ತೀಚಿನವರೆಗೂ ಮಾಗಡಿ ಬಾಲಕೃಷ್ಣ, ರಮೇಶ್ ಬಂಡಿಸಿದ್ದನಗೌಡ, ಚಲುವರಾಯಸ್ವಾಮಿ ಅವರನ್ನು ಗೆಲ್ಲಲು ಬಿಡುವುದಿಲ್ಲ ಎಂದು ಹಠ ತೊಟ್ಟಿದ್ದರು. ಅದನ್ನು ಮೀರಿ ನಾವು ಗೆದ್ದಿದ್ದೇವೆ ಎಂದಿದ್ದಾರೆ.

ಡಬಲ್ ಧಮಾಕ ಖುಷಿಯಲ್ಲಿ ಲಕ್ಷ್ಮೀ ಹೆಬ್ಬಾಳ್ಕರ್

ಜೆಡಿಎಸ್-ಬಿಜೆಪಿ ಜೊತೆ ಪೈಪೋಟಿ ನಡೆಸಿ ಮಂಡ್ಯ ಜಿಲ್ಲೆಯಲ್ಲಿ ಕಾಂಗ್ರೆಸ್ ಐದು ಸ್ಥಾನಗಳಲ್ಲಿ ಗೆಲುವು ಸಾಸುವುದು ಸುಲಭವಲ್ಲ. ನಾವು ಗೆದ್ದಿವೆ, ವಿರೋಧ ಪಕ್ಷದಲ್ಲಿದ್ದು ಕೆಲಸ ಮಾಡಿದ್ದೇವೆ, ಈಗ ಆಡಳಿತ ಪಕ್ಷದಲ್ಲಿದ್ದುಕೊಂಡು ಜನರ ನಿರೀಕ್ಷೆಯಂತೆ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ.

#ChaluvarayaSwamy #Reaction, #CabinetExpansion

- Advertisement -
RELATED ARTICLES
- Advertisment -

Most Popular