ನಾಗಮಂಗಲ ಕೋಮುಗಲಭೆ : ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಎಫ್‌ಎಸ್‌‍ಎಲ್‌ ತಂಡ

ನಾಗಮಂಗಲ,ಸೆ.13- ಪಟ್ಟಣದ ಬದ್ರಿಕೊಪ್ಪಲಿನಲ್ಲಿ ನಡೆದ ಗಲಭೆ ಸ್ಥಳಕ್ಕೆ ಎಫ್‌ಎಸ್‌‍ಎಲ್‌ ತಂಡ ಭೇಟಿ ನೀಡಿ ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದೆ. ಸ್ಥಳೀಯ ಪೊಲೀಸರೊಂದಿಗೆ ಬೆರಳಚ್ಚು ತಜ್ಞರ ತಂಡ ಆಗಮಿಸಿದ್ದು, ಸುಟ್ಟು ಕರಕಲಾದ ಅಂಗಡಿಗಳಿಗೆ ತೆರಳಿ ಅದರ ಮಾಲೀಕರುಗಳಿಂದ ಮಾಹಿತಿ ಪಡೆದು, ಸ್ಥಳದಲ್ಲಿ ದೊರೆತ ವಸ್ತುಗಳು, ಬಾಟಲಿಗಳು, ಕಲ್ಲುಗಳು, ದೊಣ್ಣೆಗಳನ್ನು ವಶಕ್ಕೆ ಪಡೆದಿದೆ. ಪೆಟ್ರೋಲ್‌ ಬಾಂಬ್‌ನಿಂದಾಗಿ ವಸ್ತುಗಳು ಕರಕಲಾಗಿರುವುದು ಕಂಡುಬಂದಿದ್ದು, ಸಂಗ್ರಹಿಸಿರುವ ವಸ್ತುಗಳನ್ನೆಲ್ಲಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು.ಇದು ಪೂರ್ವನಿಯೋಜಿತ ಸಂಚು ಎಂಬುದು ಮೇಲ್ನೋಟಕ್ಕೆ ಕಂಡುಬಂದಿದ್ದು, ಸ್ಥಳದಲ್ಲಿ ಬಿಗಿಭದ್ರತೆ ಒದಗಿಸಲಾಗಿದೆ. ಪೊಲೀಸರು ವಾಹನಗಳಲ್ಲಿ ಗಸ್ತು … Continue reading ನಾಗಮಂಗಲ ಕೋಮುಗಲಭೆ : ಹಲವು ಸಾಕ್ಷ್ಯಗಳನ್ನು ಸಂಗ್ರಹಿಸಿದ ಎಫ್‌ಎಸ್‌‍ಎಲ್‌ ತಂಡ