ನವದೆಹಲಿ,ಮಾ.29- ದೇಶದ ಸಾರ್ವಭೌಮತೆ, ಅಖಂಡತೆ, ಏಕತೆ ಹಾಗೂ ಭದ್ರತೆಗೆ ಸವಾಲಾಗಿ ಪರಿಣಮಿಸಿದ್ದ ನಕ್ಸಲೀಯರು ಮುಖ್ಯವಾಹಿನಿಯತ್ತ ಮುಖ ಮಾಡಿದ್ದು, ಕಳೆದ ಒಂದು ದಶಕದ ಅವಧಿಯಲ್ಲಿ ಸುಮಾರು 10,000ಕ್ಕೂ ಹೆಚ್ಚು ಮಾವೋವಾದಿಗಳು ಶಸಾ್ತ್ರಸ್ತ್ರ ತ್ಯಜಿಸಿ, ಉನ್ನತ ನಾಯಕತ್ವವನ್ನು ನಿರ್ಮೂಲನೆ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಅತಿಹೆಚ್ಚು ಕಾಲ ನಡೆದ ಹೋರಾಟ ಗಳಲ್ಲಿ ಒಂದಾದ ನಕ್ಸಲಿಸಂಗೆ ಮಾರಕ ಹೊಡೆತ ನೀಡಿದ್ದು, ದೇಶದಿಂದ ನಕ್ಸಲಿಸಂ ನಿರ್ಮೂಲನೆ ಮಾಡಲು ಕೇಂದ್ರ ಗೃಹ ಸಚಿವಾಲಯ ಮಾ.31ರ ವರೆಗೆ ಗಡುವು ವಿಧಿಸಿತ್ತು.
2025 ರಲ್ಲಿ, 2,300 ಮಾವೋವಾದಿಗಳು ಶಸಾ್ತ್ರಸ್ತ್ರ ತ್ಯಜಿಸಿದರೆ, 630ಕ್ಕೂ ಹೆಚ್ಚು ಕಾರ್ಯಕರ್ತರು 2026ರ ಮೊದಲ ಮೂರು ತಿಂಗಳಲ್ಲಿ ಸಶಸ್ತ್ರ ದಂಗೆಯ ಬದಲು ಮುಖ್ಯವಾಹಿನಿಯ ಜೀವನವನ್ನು ಆರಿಸಿಕೊಂಡಿದ್ದಾರೆ. 2014ರಿಂದ 2026ರ ಆರಂಭದವರೆಗಿನ ಶರಣಾಗತಿಗಳ ಅಧಿಕೃತ ಮಾಹಿತಿ ನೀಡಿವೆ.
ಸರ್ಕಾರವು ಹಿಂದಿನ ಸರ್ಕಾರಗಳ ಕೆಲವು ನೀತಿಯನ್ನು ಕೈ ಬಿಟ್ಟು ಹೋರಾಟದಲ್ಲಿ ವಿಧಾನವನ್ನು ಬದಲಾಯಿಸುವ ಮೂಲಕ ನಕ್ಸಲಿಸಂ ವಿರುದ್ಧ ಏಕೀಕೃತ, ಬಹು ಆಯಾಮದ ಮತ್ತು ನಿರ್ಣಾಯಕ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ.ರೆಡ್ ಕಾರಿಡಾರ್ನಲ್ಲಿ ರಸ್ತೆ ಬೇಲಿ ಹಾಕುವುದು ಒಂದು ಉದಾಹರಣೆಯಾಗಿದೆ. ಇದು ಒಂದು ಕಾಲದಲ್ಲಿ ಬಿಹಾರ, ಛತ್ತೀಸ್ಗಢ, ಜಾಖರ್ಂಡ್, ಒಡಿಶಾ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದ ಕೆಲವು ಭಾಗಗಳಲ್ಲಿ ಪಶುಪತಿ ಯಿಂದ ತಿರುಪತಿಯವರೆಗೆ ವಿಸ್ತರಿಸಲ್ಪಟ್ಟ ಒಂದು ಯೋಜನೆಯಾಗಿತ್ತು. ಅಲ್ಲಿ ಗುತ್ತಿಗೆದಾರರು ಕೆಲಸ ಮಾಡಲು ನಿರಾಕರಿಸಿದ್ದರು.
ಕೇಂದ್ರವು ಪೀಪಲ್ಸ್ ಲಿಬರೇಶನ್ ಗೆರಿಲ್ಲಾ ಆರ್ಮಿ (ಪಿಎಲ್ಜಿಎ) ಪ್ರಮುಖ ಪ್ರದೇಶಗಳಲ್ಲಿ ರಸ್ತೆಗಳನ್ನು ನಿರ್ಮಿಸುವ ಕೆಲಸವನ್ನು ಗಡಿ ರಸ್ತೆಗಳ ಸಂಘಟನೆಗೆ ವಹಿಸಿತು, ಇದರಲ್ಲಿ ಐದು ಪ್ರಮುಖ ರಸ್ತೆಗಳು ಮತ್ತು ಆರು ನಿರ್ಣಾಯಕ ಸೇತುವೆಗಳ ನಿರ್ಮಾಣವೂ ಸೇರಿದೆ.ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ (ಮಾವೋವಾದಿ) ಪೀಡಿತ ಪ್ರದೇಶಗಳಲ್ಲಿ 15,000 ಕಿಲೋಮೀಟರ್ಗಳಿಗೂ ಹೆಚ್ಚು ರಸ್ತೆಗಳನ್ನು ನಿರ್ಮಿಸಲಾಗಿದೆ. ಅದರಲ್ಲಿ 12,250 ಕಿಲೋಮೀಟರ್ಗ್ಗಳನ್ನು ಕಳೆದ 10 ವರ್ಷಗಳಲ್ಲಿಯೇ ಪೂರ್ಣಗೊಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2014 ರಲ್ಲಿ 66 ಇದ್ದ ಕೋಟೆ ಪೊಲೀಸ್ ಠಾಣೆಗಳನ್ನು ಕಳೆದ 10 ವರ್ಷಗಳಲ್ಲಿ 586ಕ್ಕೆ ಏರಿಸಲಾಗಿದ್ದು, ದಂಗೆಕೋರರನ್ನು ಗಂಭೀರ ಆಂತರಿಕ ಭದ್ರತಾ ಸವಾಲು ಎಂದು ಕರೆಯಲಾಗುತ್ತಿತ್ತು, ಒಮೆ ಗುಂಡಿನ ದಾಳಿ ಎಂದು ಕರೆಯಲಾಗುತ್ತಿದ್ದ ಪ್ರದೇಶಗಳಲ್ಲಿ ಇದನ್ನು ನಿರ್ಮಿಸಲಾಗಿದೆ. ಹೆಚ್ಚುವರಿಯಾಗಿ ಕಳೆದ 6 ವರ್ಷಗಳಲ್ಲಿ 361 ಹೊಸ ಭದ್ರತಾ ಶಿಬಿರಗಳನ್ನು ಸ್ಥಾಪಿಸಲಾಗಿದೆ. ಕಾರ್ಯಾಚರಣೆಯ ವ್ಯಾಪ್ತಿಯನ್ನು ಬಲಪಡಿಸಲು 68 ರಾತ್ರಿ-ಲ್ಯಾಂಡಿಂಗ್ ಹೆಲಿಪ್ಯಾಡ್ಗಳನ್ನು ನಿರ್ಮಿಸಲಾಗಿದೆ. ಇದರ ಪರಿಣಾಮ 2013ರಲ್ಲಿ 76 ಜಿಲ್ಲೆಗಳಲ್ಲಿ 330ರಷ್ಟಿದ್ದ ನಕ್ಸಲ್ ಘಟನೆಗಳನ್ನು ದಾಖಲಿಸುವ ಪೊಲೀಸ್ ಠಾಣೆಗಳ ಸಂಖ್ಯೆ ಜೂನ್ 2025ರ ವೇಳೆಗೆ 22 ಜಿಲ್ಲೆಗಳಲ್ಲಿ ಕೇವಲ 52 ಕ್ಕೆ ಇಳಿದಿದೆ.
ಭದ್ರತಾ ಒತ್ತಡ ಮತ್ತು ಪುನರ್ವಸತಿ ಪ್ರಯತ್ನಗಳ ಸಂಯೋಜನೆಯ ಮೇಲೆ ಕೇಂದ್ರೀಕರಿಸುವ ಸರ್ಕಾರದ ಕಾರ್ಯತಂತ್ರವು ಚಳುವಳಿಯ ಮೂಲವನ್ನು ಚಿವುಟಿ ಹಾಕಿದೆ. ಛತ್ತೀಸ್ಗಢದಲ್ಲಿ ಅದು ತಲೆ ಇಲ್ಲದಂತಾಗಿದೆ.
ಆಡಳಿತ ದುರ್ಬಲಗೊಂಡ ಮತ್ತು ಮಾವೋವಾದಿಗಳು ಅಂಚಿನಲ್ಲಿರುವ ಸಮುದಾಯಗಳಲ್ಲಿ ಬಲವಂತ ಮತ್ತು ಒಪ್ಪಿಗೆ ಎರಡನ್ನೂ ಬೆಳೆಸಿದ ಪ್ರದೇಶಗಳಲ್ಲಿ ಸರ್ಕಾರಿ ಯೋಜನೆಗಳ ಫಲಗಳು ಸಾಮಾನ್ಯಜನರನ್ನು ತಲುಪಲು ಪ್ರಾರಂಭಿಸಿದವು. ಮಂತ್ರಿ-ಆವಾಸ್ ಯೋಜನೆಯಡಿ, ಮಂಜೂರಾದ ಮನೆಗಳ ಸಂಖ್ಯೆ ಮಾರ್ಚ್ 2024 ರಲ್ಲಿ 92,847 ರಿಂದ ಅಕ್ಟೋಬರ್ 2025 ರಲ್ಲಿ 2,54,045 ಕ್ಕೆ ಏರಿತು. ಅದೇ ಅವಧಿಯಲ್ಲಿ ಆಧಾರ್ ದಾಖಲಾತಿಯು 23.50 ಲಕ್ಷದಿಂದ 24.85 ಲಕ್ಷಕ್ಕೆ ಏರಿತು ಮತ್ತು 19.77 ಲಕ್ಷಕ್ಕೆ ಹೋಲಿಸಿದರೆ 21.44 ಲಕ್ಷ ಆಯುಷಾನ್ ಕಾರ್ಡ್ಗಳನ್ನು ನೀಡಲಾಗಿದೆ. ಸಾಮಾಜಿಕ-ಆರ್ಥಿಕ ಬೇರುಗಳನ್ನು ಕಡಿಮೆ ಮಾಡುವ ಗುರಿಯನ್ನು ಹೊಂದಿರುವ ಸರ್ಕಾರವು ಶಿಕ್ಷಣ ಮತ್ತು ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆ ಮಾಡಿದೆ.
