ವೃದ್ಧಿಮಾನ್ ಮಾತುಗಳಿಂದ ನನಗೆ ಯಾವುದೇ ನೋವಾಗಿಲ್ಲ : ದ್ರಾವಿಡ್

Social Share

ಕೊಲ್ಕತ್ತಾ.ಫೆ.21- ಅನುಭವಿ ಕೀಪರ್ ವೃದ್ಧಿಮಾನ್ ಸಹಾ ಅವರ ಆಡಿರುವ ಮಾತುಗಳಿಂದ ನನಗೆ ಯಾವುದೇ ನೋವಾಗಿಲ್ಲ ಎಂದು ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹೇಳಿದ್ದಾರೆ.ಟೆಸ್ಟ್ ತಂಡಕ್ಕೆ ಆಯ್ಖೆ ಮಾಡದೆ ಅನ್ಯಾಯ ಮಾಡಲಾಗಿದೆ ಎಂದು ಬಿಸಿಸಿಏ ಅಧ್ಯಕ್ಷ ಸೌರವ್ ಗಂಗೂಲಿ ಹಾಗು ನನಗೆ ದಕ್ಷಿಣ ಆಫ್ರಿಕಾ ಸರಣಿಯ ನಂತರ ಖಾಸಗಿ ಸಂಭಾಷಣೆಯ ವೇಳೆ ಮುಖ್ಯ ಕೋಚ್ ದ್ರಾವಿಡ್ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಕೇಳಿಕೊಂಡಿದ್ದರು ಎಂದು ವೃದ್ಧಿಮಾನ್ ಸಹಾ ಮಾಧ್ಯಮಗಳಿಗೆ ಮುಂದೆ ಅಸಮಾಧಾನ ವ್ಯಕ್ತಪಡಿಸಿದ್ದರು.ಇದು ಭಾರಿ ಸಂಚಲನ ಮೂಡಿಸಿತ್ತು.
ಇದರ ಬಗ್ಗೆ ತಾಳ್ಮೆಯಿಂದಲ್ಲೇ ಮಾತನಾಡಿರುವ ರಾಹುಲ್ ದ್ರಾವಿಡ್ , ನನಗೆ ಯಾವುದೇ ನೋವಾಗಿಲ್ಲ. ವೃದ್ಧಿ ಮತ್ತು ಅವರ ಸಾಧನೆಗಳು ಮತ್ತು ಭಾರತೀಯ ಕ್ರಿಕೆಟ್‍ಅವರ ಕೊಡುಗೆಯ ಬಗ್ಗೆ ನನಗೆ ಆಳವಾದ ಗೌರವವಿದೆ ಅವರು ಪ್ರಾಮಾಣಿಕತೆ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು.
ಚರ್ಚೆಯ ವಿಷಯಗಳನ್ನು ಆಟಗಾರರು ಇಷ್ಟಪಡಲಿ ಅಥವಾ ಇಷ್ಟಪಡದಿದ್ದರೂ ಅವರೊಂದಿಗೆ ಅಂತಹ ಸಂಭಾಷಣೆಗಳನ್ನು ಮುಂದುವರಿಸುವುದಾಗಿ ಹೇಳಿದ್ದಾರೆ. ನಾನು ಹೇಳುವ ಎಲ್ಲವನ್ನೂ ಯಾವಾಗಲೂ ಒಪ್ಪುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ ಆಟಗಾರರರನ್ನು ಆಯ್ಕೆ ಮಾಡುವ ಮೊದಲು ಚರ್ಚಿಸುವುದು ತತ್ವವಾಗಿದೆ ಆಟಗಾರರು ಅಸಮಾಧಾನಗೊಳ್ಳುವುದು ಮತ್ತು ನೋಯಿಸುವುದು ಸಹಜ ಎಂದು ಹೇಳಿದ್ದಾರೆ.
ರಿಷಬ್ ಪಂತ್ ಈಗಾಗಲೇ ಹೊಸ ನಂ.1 ಕೀಪರ್ ಆಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿರುವುದರಿಂದ ಸಹಾ ಅವರಿಗೆ ಅವಕಾಶಗಳು ಸಿಗುತ್ತಿಲ್ಲ
ಆದರೆ ಕೆಲವು ಹಂತದಲ್ಲಿ, ನಾನು ಆ ಸಂಭಾಷಣೆಗಳನ್ನು ಎದುರಿಸಲು ಸಾಧ್ಯಎಂಬ ಅಂಶವನ್ನು ಅವರು ಗೌರವಿಸುತ್ತಾರೆ ಎಂದು ನಾನು ಭಾವಿಸುತ್ತೇನೆ ಎಂದು ದ್ರಾವಿಡ್‍ಹೇಳಿದರು.

Articles You Might Like

Share This Article