ನಿಷ್ಪಕ್ಷ ತನಿಖೆಯಾದರೆ ನನಗಿಂತ ಮೊದಲೇ ಪರಮೇಶ್ವರ್‌ ಅರೆಸ್ಟ್ ಆಗ್ತಾರೆ : ಯತ್ನಾಳ್‌

ಬೆಂಗಳೂರು,ಅ.18- ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ಅವರ ಮೇಲಿರುವ ಹಗರಣಗಳನ್ನು ಪೊಲೀಸರು ನಿಷ್ಟಕ್ಷಪಾತವಾಗಿ ತನಿಖೆ ನಡೆಸಿದರೆ ನನಗಿಂತ ಮುಂಚೆಯೇ ಅವರು ಬಂಧನಕ್ಕೆಗೊಳಗಾಗುತ್ತಾರೆ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ತಿರುಗೇಟು ನೀಡಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸರ ತನಿಖೆಗೆ ಸಹಕಾರ ನೀಡದಿದ್ದರೆ, ಬಂಧಿಸಬೇಕಾಗುತ್ತದೆ ಎಂಬ ಪರಮೇಶ್ವರ್‌ ಹೇಳಿಕೆಗೆ ಸಿಡಿಮಿಡಿಗೊಂಡ ಯತ್ನಾಳ್‌, ಅವರ ಹಗರಣ ದೊಡ್ಡದಿದೆ. ಅವರೇ ಬಂಧನವಾಗುತ್ತಾರೆ ಕಾದುನೋಡಿ ಎಂದು ಹೇಳಿದರು.ಪರಮೇಶ್ವರ್‌ ಯಾಕ್ರಿ ಬೇಕು ದೇಶದಲ್ಲಿ ಕಾನೂನು ದೊಡ್ಡದಿದೆ. ಬರೇ ಕಲೆಕ್ಷನ್‌ ಮಾಡೋದು ಬಿಟ್ಟು ಕಣ್ಣು … Continue reading ನಿಷ್ಪಕ್ಷ ತನಿಖೆಯಾದರೆ ನನಗಿಂತ ಮೊದಲೇ ಪರಮೇಶ್ವರ್‌ ಅರೆಸ್ಟ್ ಆಗ್ತಾರೆ : ಯತ್ನಾಳ್‌