ಹಿಜಾಬ್ ಗಲಾಟೆ ಮಾಡುವವರನ್ನು ಒದ್ದು ಒಳಗೆ ಹಾಕಿ : ಸಚಿವ ಪ್ರಲ್ಹಾದ ಜೋಶಿ

Social Share

ಹುಬ್ಬಳ್ಳಿ: ಹಿಜಾಬ್ ಹಾಕಿಸಲು ಹಾಗೂ ತೆಗೆಸಲು ಕಾಲೇಜು ಬಳಿ ಯಾರು ಬರುತ್ತಾರೆಯೋ, ಅವರನ್ನು ಒದ್ದು ಒಳಗೆ ಹಾಕಬೇಕು ಎಂದು ರಾಜ್ಯ ಸರ್ಕಾರಕ್ಕೆ ಕೇಂದ್ರ‌ ಸಚಿವ ಪ್ರಲ್ಹಾದ ಜೋಶಿ ಹೇಳಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲವನ್ನೂ ಸಹಿಸಿಕೊಂಡು ಸುಮ್ಮನೆ ಕೂರಲು ಆಗುವುದಿಲ್ಲ‌. ವಿದ್ಯಾರ್ಥಿಗಳನ್ನು ಕಾಲೇಜಿಗೆ ಸೇರಿಸಿಕೊಳ್ಳಿ. ವಿನಾಕಾರಣ‌ ವಿದ್ಯಾರ್ಥಿಗಳನ್ನು ಉತ್ತೇಜಿಸುವವರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದರು.
ನ್ಯಾಯಾಲಯದ ಮಧ್ಯಂತರ ಆದೇಶ ಎಲ್ಲರೂ ಪಾಲಿಸಬೇಕು. ಹೀಗೆಯೇ ಬಿಟ್ಟರೆ ಅಂತಿಮ ಆದೇಶವನ್ನು ಪಾಲಿಸುವುದಿಲ್ಲ ಎಂದು ಹೇಳಬಹುದು. ಕಠಿಣ ಕ್ರಮಕ್ಕೆ ರಾಜ್ಯ ಸರ್ಕಾರ ಮುಂದಾಗಬೇಕು ಎಂದರು.
ಕಾಂಗ್ರೆಸ್‌ಗೆ ಧರಣಿ ಮಾಡುವುದೇ ಕೆಲಸವಾಗಿದೆ. ಮುಂದಿನ ವರ್ಷಗಳಲ್ಲಿಯೂ ಅವರಿಗೆ‌ ಅದೇ ಕೆಲಸ ಮುಂದುವರಿಯಲಿದೆ‌‌ ಎಂದು ವ್ಯಂಗ್ಯವಾಡಿದರು.

Articles You Might Like

Share This Article