ತಾಕತ್ತಿಗೆ ಸವಾಲು ಹಾಕಿದವರಿಗೆ ಬಿಸಿ ರೋಡ್‌ಗೆ ಬಂದು ಉತ್ತರ ನೀಡಿದ ಹಿಂದೂಪರ ಸಂಘಟನೆಗಳು

ಬೆಂಗಳೂರು,ಸೆ.16- ಮಂಡ್ಯಜಿಲ್ಲೆ ನಾಗಮಂಗಲದಲ್ಲಿ ನಡೆದ ಕೋಮುಸಂಘರ್ಷ ತಹಬದಿಗೆ ಬರುವ ಮುನ್ನವೇ ಮಂಗಳೂರಿನಲ್ಲಿ ಹಿಂದೂಪರ ಸಂಘಟನೆಗಳು ಬೀದಿಗಿಳಿದಿದ್ದು, ಕಾವೇರಿದ ವಾತಾವರಣ ನಿರ್ಮಾಣವಾಗಿತ್ತು. ನಾಗಮಂಗಲದಲ್ಲಿ ಗಣೇಶೋತ್ಸವದ ವೇಳೆ ಕಲ್ಲುತೂರಾಟ ನಡೆಸಿದ ಘಟನೆಯ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ ಆರೋಪ-ಪ್ರತ್ಯಾರೋಪಗಳು ಭುಗಿಲೆದ್ದಿದ್ದವು. ಹಿಂದೂ ಸಂಘಟನೆಯ ಮುಖಂಡ ಶರಣ್‌ ಪಂಪ್‌ವೆಲ್‌ ಈದ್‌ ಮಿಲಾದ್‌ ಮೆರವಣಿಗೆಗೆ ಅವಕಾಶ ಮಾಡಿಕೊಡಬಾರದೆಂದು ಒತ್ತಾಯಿಸಿದ್ದರು. ಇದಕ್ಕೆ ಪ್ರತಿಸವಾಲು ಹಾಕಿದ್ದ ಬಂಟ್ವಾಳ ಪುರಸಭೆಯ ಮಾಜಿ ಅಧ್ಯಕ್ಷ ಶರೀಫ್‌ ಹಾಗೂ ಹುಸೇನ್ ಎಂಬುವರು ತಾಕತ್ತಿದ್ದರೆ ಬಂಟ್ವಾಳದ ಬಿಸಿ ರೋಡ್‌ಗೆ ಬನ್ನಿ ಎಂದು ಹೇಳಿದ್ದರು. ಈ … Continue reading ತಾಕತ್ತಿಗೆ ಸವಾಲು ಹಾಕಿದವರಿಗೆ ಬಿಸಿ ರೋಡ್‌ಗೆ ಬಂದು ಉತ್ತರ ನೀಡಿದ ಹಿಂದೂಪರ ಸಂಘಟನೆಗಳು