Saturday, September 23, 2023
Homeಇದೀಗ ಬಂದ ಸುದ್ದಿ18ರಂದು ಗಣೇಶ ಹಬ್ಬದ ಸಾರ್ವತ್ರಿಕ ರಜೆ ಘೋಷಣೆ

18ರಂದು ಗಣೇಶ ಹಬ್ಬದ ಸಾರ್ವತ್ರಿಕ ರಜೆ ಘೋಷಣೆ

- Advertisement -

ಬೆಂಗಳೂರು,ಸೆ.16- ವರಸಿದ್ದಿ ವಿನಾಯಕ(ಗಣೇಶಹಬ್ಬ) ವ್ರತದ ಸಾರ್ವತ್ರಿಕ ರಜಾ ದಿನವನ್ನು ಸೆ.18ರಂದು ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಈಗಾಗಲೇ ಆದೇಶ ಹೊರಡಿಸಿರುವಂತೆ ಸೆ.18ರಂದು ಗಣೇಶ ಹಬ್ಬಕ್ಕೆ ರಜೆ ಇರುತ್ತದೆ. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಪ್ರಾಣಬಿಟ್ಟ ರೈತರಿಗೆ ಮಾನವೀಯತೆಯ ನೆರವು ನೀಡಿ : ಕುಮಾರಸ್ವಾಮಿ ಆಗ್ರಹ

- Advertisement -

ಗಣೇಶ ಚತುರ್ಥಿಯ ಸಾರ್ವತ್ರಿಕ ರಜೆ ಬಗ್ಗೆ ಸಾರ್ವಜನಿಕರಲ್ಲಿ ಅನಗತ್ಯ ಗೊಂದಲ ಬೇಡ ಎಂದು ಸ್ಪಷ್ಟಪಡಿಸಲಾಗಿದೆ. ಆದರೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾಧಿಕಾರಿಗಳು ಗಣೇಶ ಹಬ್ಬದ ರಜೆಯನ್ನು ಸೆ.18ರ ಬದಲು ಸೆ.19ರಂದು ಘೋಷಣೆ ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಅದು ಇನ್ನು ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಲಾಗಿದೆ.

#holiday, #GaneshaFestival,

- Advertisement -
RELATED ARTICLES
- Advertisment -

Most Popular